Bengaluru, ಏಪ್ರಿಲ್ 26 -- ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಮೂರು ವರ್ಷದ ಮೇಲಾಯಿತು. ಇಂದಿಗೂ ಇಡೀ ಕರ್ನಾಟಕ ಅವರ ನೆನಪಿನಲ್ಲಿದೆ. ನಿತ್ಯ ಒಂದಲ್ಲ ಒಂದು ರೀತಿ ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ ಅಪ್ಪು ಅವರ ಅಭಿಮಾನಿಗಳು. ಇದೀಗ ಇದೇ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮತ್ತು ಅವರ ಸಾವಿನ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್‌ ಗರುಡ ಪುರಾಣ ಉಲ್ಲೇಖಿಸಿ ಮಾತನಾಡಿದ್ದಾರೆ. ಒಂದಷ್ಟು ಅಚ್ಚರಿಯ ವಿಚಾರಗಳನ್ನೂ ಹೇಳಿದ್ದಾರೆ. ಪುನೀತ್‌ ಅವರದ್ದು ನಿಜಕ್ಕೂ ಪುಣ್ಯದ ಸಾವು ಎಂದಿದ್ದಾರೆ.

ರಾಜೇಶ್‌ ಗೌಡ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೂಪಾ ಅಯ್ಯರ್, ಪುನೀತ್‌ ಅವರ ಸಾವಿನ ಬಳಿಕ ಅವರು ಏನಾಗಿರುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ಪುನೀತ್‌ ರಾಜ್‌ಕುಮಾರ್‌ ಅಂದ ತಕ್ಷಣ ಎಲ್ಲರ ಮೊಗದಲ್ಲೂ ನಗು ಅರಳುತ್ತದೆ. ಬಾಕಿ ಉಳಿದ ಎಲ್ಲ ಕರ್ಮಗಳನ್ನು ಮುಗಿಸುವ ಹಂತಕ್ಕೆ ಬಂದಿದ್ದರು. ಅದಕ್ಕಾಗಿಯೇ ಕಲಾವಿದರ ಮನೆಯಲ್ಲಿ ಕಲಾವಿದನಾಗಿ ಜನ್ಮವೆತ್ತಿದ್ದರು. ಇರೋವಷ್ಟು ದ...