Bangalore, ಮೇ 7 -- ಬೆಂಗಳೂರು: ನನಗೆ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಎಂದರೆ ಬಲು ಇಷ್ಟ. ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದ ರೀತಿಯೇ ಯಾವಾಗಲೂ ಇಷ್ಟವಾಗುತ್ತಿತ್ತು. ಅವರಂತೆಯೇ ನಾನು ಮುಂದೆ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಂಡು ದುಡಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎನ್ನುವ ಸಂಕಲ್ಪ ಮಾಡಿಕೊಂಡೆ. ಅದೇ ಗುರಿಯೊಂದಿಗೆ ಓದಿ ಎಸ್ಎಸ್ಎಲ್‌ಸಿಯಲ್ಲಿ ಟಾಪರ್‌ ಆಗಿದ್ದೇನೆ. ಮನೆಯಲ್ಲಿ ಕಷ್ಟವಿದ್ದರೂ ನನ್ನ ಛಲ ಎಂದಿಗೂ ಕಡಿಮೆಯಾಗೋಲ್ಲ. ಮುಂದೆಯೂ ಹೀಗೆ ಓದುತ್ತೇನೆ. ವೈದ್ಯಳಾಗಬೇಕು ಎನ್ನುವ ಆಸೆಯಿದೆ. ಇದಕ್ಕಾಗಿ ತಯಾರಿಯನ್ನು ಶುರು ಮಾಡಿಕೊಳ್ಳುತ್ತೇನೆ. ಕಷ್ಟಪಟ್ಟು ಓದುವ ಜತೆಗೆ ನಿಗದಿತ ಗುರಿ ಇಟ್ಟುಕೊಂಡು ಓದಿದರೆ ಖಂಡಿತಾ ಯಶಸ್ಸು ಸಾಧಿಸಬಹುದು. ಎಲ್ಲಿಯೂ ಗುರಿ ತಪ್ಪಬಾರದಷ್ಟೇ.

ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ವಿದ್ಯಾರ್ಥಿನಿ, ಈ ಬಾರಿ ಎಸ್ಎಸ್ಎಲ್‌ಸಿಯಲ್ಲಿ ಟಾಪರ್‌ ಎನ್ನಿಸಿರುವ ಭಾವನಾ ವಿಶ್ವಾಸದ ನುಡಿ. ವಿಜಯಪುರದಲ್ಲಿಯೇ ವಿದ್ಯುತ್‌ ಮ...