ಭಾರತ, ಮೇ 8 -- ಪಹಲ್ಗಾಮ್​ನಲ್ಲಿ 26 ಜನರನ್ನು ಕೊಂದಿದ್ದ ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಭಾರತ ದಿಟ್ಟ ಉತ್ತರ ನೀಡುತ್ತಿದೆ. ಈಗಾಗಲೇ ಉಗ್ರರಿರಿದ್ದ 9 ನೆಲೆಗಳನ್ನು ಧ್ವಂಸಗೊಳಿಸಿರುವ ಭಾರತೀಯ ಸೇನೆ, ಇದೀಗ ಉಗ್ರರ ಅಡಗು ತಾಣಗಳ ನಿರ್ನಾಮಕ್ಕೆ ಹುಡುಕಿ ಹುಡುಕಿ ಹೊಡೆಯುತ್ತಿದೆ. ಇದಕ್ಕೆ ಪ್ರತಿದಾಳಿಯಾಗಿ ಪಾಕಿಸ್ತಾನ ಫೂಂಚ್ ಜಿಲ್ಲೆಯಲ್ಲಿ ನಾಗರಿಕರ ಮೇಲೆ ಗುಂಡು ಹೊಡೆದಿದ್ದು, 15 ಮಂದಿಗೂ ಹೆಚ್ಚು ಸಾವನ್ನಪ್ಪಿದ್ದರು. ಇದಕ್ಕೆ ಭಾರೀ ಕೋಪಗೊಂಡಿರುವ ಭಾರತೀಯ ಸೇನೆ, ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಅದರಂತೆ ಇಂದು ರಾತ್ರಿ ಕ್ರಿಕೆಟ್ ಪಂದ್ಯ ನಡೆಯಬೇಕಿದ್ದ ಸ್ಟೇಡಿಯಂ ಮೇಲೂ ದಾಳಿ ನಡೆದಿದ್ದು, ಭಾಗಶಃ ಹಾನಿಯಾಗಿದೆ.

ಇಂದು (ಮೇ 8) ರಾತ್ರಿ 8 ಗಂಟೆಗೆ ನಿಗದಿಯಾಗಿದ್ದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ಗುರುವಾರ ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಪೇಶಾವರ್ ಝಲ್ಮಿ ಮತ್ತು ಕ...