ಭಾರತ, ಮೇ 27 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 26ರ ಸಂಚಿಕೆಯಲ್ಲಿ ಸುಬ್ಬು ಮನೆಯವರೆಲ್ಲಾ ಶ್ರಾವಣಿಯನ್ನು ಸೊಸೆ ಎಂದು ಒಪ್ಪಿಕೊಂಡಿರುವುದು ಮಾತ್ರವಲ್ಲ, ಪ್ರೀತಿಯ ಸುಧೆ ಹರಿಸುತ್ತಿರುತ್ತಾರೆ. ಶ್ರಾವಣಿ ಜೊತೆ ಮನೆಯ ಹೆಂಗಸರೆಲ್ಲಾ ಖುಷಿಯಿಂದ ಮಾತನಾಡುತ್ತಾ ಅಡುಗೆ ಕೆಲಸದಲ್ಲಿ ನಿರತರಾಗಿರುತ್ತಾರೆ. ಆ ಹೊತ್ತಿಗೆ ಸರಿಯಾಗಿ ಎಂಟ್ರಿ ಕೊಡ್ತಾಳೆ ಶ್ರೀವಲ್ಲಿ.

ನಗು ನಗುತ್ತಾ ಸುಬ್ಬು ಮನೆಯ ಅಡುಗೆಮನೆ ಕಡೆ ಬರುವ ಶ್ರೀವಲ್ಲಿಗೆ ಅಲ್ಲಿನ ದೃಶ್ಯ ಕಂಡು ಉರಿದು ಹೋಗುತ್ತದೆ. ಅವಳಿಗೆ ಮನೆಯವರೆಲ್ಲಾ ಶ್ರಾವಣಿ ಜೊತೆ ಒಂದಾಗಿರುವುದು ತಿಳಿಯುತ್ತದೆ. ಧನಲಕ್ಷ್ಮೀ ಕೂಡ ಶ್ರಾವಣಿ ಪರವಾಗಿರುವುದು ಅವಳಿಗೆ ನುಂಗಲಾರದ ತುತ್ತಾಗಿರುತ್ತದೆ. ಅದನ್ನು ನೋಡಿ ಕೋಪದಿಂದ ಹೊರಡುವ ಶ್ರೀವಲ್ಲಿ ಹಿಂದೆ ಹೋಗುವ ಧನಲಕ್ಷ್ಮೀ ಅವಳನ್ನು ಸಮಾಧಾನ ಮಾಡಲು ನೋಡುತ್ತಾಳೆ. ಶ್ರೀವಲ್ಲಿಗೆ ಪರಿಸ್ಥಿತಿ ಅರ್ಥ ಮಾಡಿಸಲು ಪ್ರಯತ್ನಿಸಿದರೂ ಅರ್ಥ ಮಾಡಿಕೊಳ್ಳದೇ ಇದ್ದಾಗ ಧನಲಕ್ಷ್ಮೀ 'ತನ್ನ ತಮ್ಮ ಯಾವತ್ತಿದ್ದರೂ ಶ್ರಾವಣಿ ಮೇಡಂಗೆ ಸ್ವತಃ, ಅವರನ್ನು ದೂರು ಮ...