ಭಾರತ, ಮೇ 8 -- ಪಹಲ್ಗಾಮ್​ನಲ್ಲಿ ಭಾರತದ 26 ಅಮಾಯಕರನ್ನು ಕೊಂದಿದ್ದ ಕಾರಣ ಆಪರೇಷನ್ ಸಿಂದೂರಿ ಮೂಲಕ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಇಂಡೋ-ಪಾಕ್​ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಪಂಜಾಬ್​ನ ಚಂಢೀಗಡದಲ್ಲಿ ಭಾರತೀಯ ಸೇನೆ ಸೈರನ್ ಮೊಳಗಿಸಿದ್ದು, ಸಂಪೂರ್ಣ ವಿದ್ಯುತ್ ಕಡಿತಗೊಳಿಸಿ ಬ್ಲ್ಯಾಕ್​​ಔಟ್ ಮಾಡಲಾಗಿದೆ. ಪರಿಣಾಮ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಭಾರತೀಯ ಸೇನೆ ಆದೇಶ ನೀಡಿದ ಹಿನ್ನೆಲೆ ಪಂದ್ಯವನ್ನು ನಿಲ್ಲಿಸಲಾಗಿದೆ. ಅಲ್ಲದೆ, ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಸ್ಥಳಾಂತರ ಮಾಡಲಾಗುತ್ತಿದೆ.

Published by HT Digital Content Services with permission from HT Kannada....