Madikeri, ಮೇ 18 -- ಭಾರತದ ಸೇನಾ ಮಹಾ ದಂಡ ನಾಯಕರಾಗಿದ್ದ ಕೊಡಗಿನ ಹೆಮ್ಮೆಯ ಪುತ್ರ ಜನರಲ್‌ ಕೆ.ಎಸ್.ತಿಮ್ಮಯ್ಯ ಅವರು ಹಲವು ಯುದ್ದಗಳಲ್ಲಿ ಭಾರತವನ್ನು ಮುನ್ನಡೆಸಿದವರು. ತಿಮ್ಮಯ್ಯನವರು ಹುಟ್ಟಿ ಬೆಳೆದಿದ್ದ ಮಡಿಕೇರಿಯಲ್ಲಿರುವ ಮನೆ 'ಸನ್ನಿಸೈಡ್' ಈಗ ಯುದ್ಧ ಸ್ಮಾರಕವಾಗಿ ರೂಪುಗೊಂಡು ನಾಲ್ಕು ವರ್ಷವೇ ಕಳೆದಿದೆ.

ಸೇನಾ ಸಿಬ್ಬಂದಿ ತಿಂಗಳು ಗಟ್ಟಲೇ ಗಡಿಯಲ್ಲಿ ವಿಭಿನ್ನ ಹವಾಮಾನ, ಸನ್ನಿವೇಶದಲ್ಲಿ ದೇಶ ಕಾಯುತ್ತಾರೆ. ಅವರು ಬಳಸುವ ಶೂ ಅವರ ಶಕ್ತಿಯನ್ನು ಸಾರುತ್ತದೆ. ಅಂತಹ ಶೂ ವಸ್ತು ಸಂಗ್ರಹಾಲಯದ ಆಕರ್ಷಣೆ.

ಮಡಿಕೇರಿಯ ಜನರಲ್‌ ತಿಮ್ಮಯ್ಯ ವಸ್ತು ಸಂಗ್ರಹಾಲಯದಲ್ಲಿ ಗಮನ ಸೆಳೆಯುವ ಸೇನಾ ಟ್ಯಾಂಕ್. ಈ ಟ್ಯಾಂಕರ್ 1971ರಲ್ಲಿ ಭಾರತ - ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ 'ಹಿಮ್ಮತ್' ಹೆಸರಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎನ್ನುವುದು ವಿಶೇಷ.

1971ರ ಭಾರತ -ಪಾಕಿಸ್ತಾನದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಗ್ 21 ಯುದ್ಧ ವಿಮಾನವು ಕೂಡ ಜನರಲ್‌ ತಿಮ್ಮಯ್ಯ ವಸ್ತು ಸಂಗ್ರಹಾಲಯದ ಆಕರ್ಷಣೆ ಹೆಚ್ಚಿಸಿದೆ.

ಭಾ...