ಭಾರತ, ಮೇ 7 -- ಆಪರೇಷನ್ ಸಿಂದೂರ್: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರ ದಾಳಿಗೆ 25 ಭಾರತೀಯರು ಹಾಗೂ ಒಬ್ಬ ನೇಪಾಳಿ ಪ್ರಜೆ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದ ಭಾರತ, ಬುಧವಾರ (ಮೇ 7) ನಸುಕಿನ ವೇಳೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಸರ್ಕಾರ ಹಾಗೂ ಅದರ ಆಶ್ರಯದಲ್ಲಿದ್ದ ಉಗ್ರರು ಬೆಚ್ಚಿ ಬೀಳುವಂತಾಯಿತು. ಎಲ್ಲರ ಗಮನವನ್ನೂ ಇಂದಿನ (ಮೇ 7) ಮಾಕ್‌ ಡ್ರಿಲ್ ಮೇಲೆ ಸೆಳೆದಿದ್ದ ಭಾರತ ಸರ್ಕಾರ, ರಾತ್ರೋರಾತ್ರಿ ಈ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಯಿತು. ಹಾಗೆ, ಆಪರೇಷನ್ ಸಿಂದೂರ್ ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿತು. ಅದೇ ರೀತಿ, ಭಾರತದ ದಾಳಿ ಗುರಿಮುಟ್ಟಲು ನೆರವಾದ ಕಾರ್ಯತಂತ್ರದ ಕಡೆಗೂ ಗಮನಸೆಳೆಯಿತು.

ಪಹಲ್ಗಾಮ್‌ ದಾಳಿಯ ಬೆನ್ನಿಗೆ ಭಾರತ ಮರುದಾಳಿ ನಡೆಸಲಿಲ್ಲ. ಸಮಾಧಾನದಿಂದ ಭಯೋತ್ಪಾದನೆ ವಿರುದ್ಧ ಹೋರಾಟದ ನಿರ್ಧಾರವನ್ನು ಬಲವಾಗಿ ಸ್ಪಷ್ಟಪಡಿಸುತ್ತ ಬಂದ ಭಾರತ ಸರ್ಕಾರ,...