ಭಾರತ, ಮೇ 9 -- ಕತ್ತಲಾಗುತ್ತಿದ್ದಂತೆ ಪಾಕಿಸ್ತಾನವು ಭಾರತದ ಮೇಲೆ ಡ್ರೋನ್‌ ದಾಳಿ ಮತ್ತೆ ಶುರು ಮಾಡಿದೆ. ಗುರುವಾರ ರಾತ್ರಿ ನೂರಾರು ಡ್ರೋನ್‌ ದಾಳಿ ನಡೆಸಿದ್ದ ಪಾಕಿಸ್ತಾನ, ಇಂದು (ಮೇ 9) ಮತ್ತೆ ದಾಳಿ ಶುರು ಮಾಡಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಸ್ಫೋಟದ ಶಬ್ದ ಮತ್ತು ಸೈರನ್ ಸದ್ದಿನ ನಡುವೆ ಜಮ್ಮು ನಗರ ಇಂದು ಕತ್ತಲೆಯಲ್ಲಿ ಮುಳುಗಿದೆ. ಇಷ್ಟೇ ಅಲ್ಲ, ಪಂಜಾಬ್‌ ಹಾಗೂ ರಾಜಸ್ಥಾನದ ಕೆಲವು ನಗರಗಳನ್ನೂ ಬ್ಲ್ಯಾಕ್‌ಔಟ್‌ ಮಾಡಲಾಗಿದೆ. ಆಪರೇಷನ್ ಸಿಂದೂರದ ಭಾಗವಾಗಿ ಭಾರತವು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ಗುರಿಯ ದಾಳಿಯ ನಂತರ ಪಾಕಿಸ್ತಾನದ ನಿರಂತರ ಡ್ರೋನ್‌, ಶೆಲ್ ದಾಳಿ ನಡೆಸಿದ್ದು, ಹಲವೆಡೆ ಸ್ಫೋಟಗಳು ಸಂಭವಿಸಿವೆ.

"ನಾನು ಇರುವ ಪ್ರದೇಶದಲ್ಲಿ ಆಗಾಗ ಸ್ಫೋಟಗಳು ಪ್ರತಿಧ್ವನಿಸುತ್ತಿವೆ" ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ನಗರವು ಕತ್ತಲೆಯಲ್ಲಿ ಮುಳುಗಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ...