Delhi, ಮೇ 8 -- ದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಾರತದ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಅಮಾನವೀಯ ದಾಳಿ, 26 ಮಂದಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ರೀತಿಗೆ ನಾವು ಉತ್ತರ ನೀಡುವುದಾಗಿ ಹೇಳಿದ್ದೆವು. ಇದಕ್ಕಾಗಿಯೇ ಭಾರತವು ಆಪರೇಷನ್‌ ಸಿಂದೂರವನ್ನು ರೂಪಿಸಿದ್ದು ಉಗ್ರರನ್ನು ಗುರಿಯಾಗಿಟ್ಟುಕೊಂಡೇ. ಆಪರೇಷನ್‌ ಸಿಂದೂರ್‌ ನಂತರ ಪಾಕಿಸ್ತಾನವು ಮತ್ತೆ ದಾಳಿ ಮಾಡುವ ಪ್ರಯತ್ನ ಮಾಡಿದೆ. ಭಾರತದ ಗಡಿ ನಗರಗಳನ್ನು ಗುರಿಯಾಗಿಟ್ಟುಕೊಂಡು ಅಲ್ಲಲ್ಲಿ ದಾಳಿ ಮಾಡಿದ್ದು ಇದಕ್ಕೆ ಭಾರತ ಉತ್ತರ ನೀಡಿದೆ. ಪಾಕಿಸ್ತಾನ ತನ್ನದೇ ಒಪ್ಪಂದಗಳನ್ನು ಮುರಿದು ನಡೆದುಕೊಳ್ಳುತ್ತಿರುವ ರೀತಿಯನ್ನು ಭಾರತ ಮಾತ್ರವಲ್ಲ. ವಿಶ್ವದ ಬಹುತೇಕ ದೇಶಗಳು ಒಪ್ಪುತ್ತಿಲ್ಲ. ಈಗಲೂ ಪಾಕಿಸ್ತಾನ ಯಾವ ರೀತಿಯಲ್ಲಿ ಕ್ರಿಯೆ ನೀಡಿದರೂ ಭಾರತ ಪ್ರತಿಕ್ರಿಯೆ ನೀಡಲು ಸನ್ನದ್ದವಾಗಿದೆ.

ಇದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರ ಖಡಕ್‌ ಎಚ್ಚರಿಕೆ. ಗುರುವಾರ ಸಂಜೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಆಪರೇಷನ್‌ ಸಿ...