Delhi, ಮೇ 8 -- ದೆಹಲಿ: ಪಾಕಿಸ್ತಾನದ ವರ್ತನೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಭಾರತ ನೀಡಿದ ಎಚ್ಚರವನ್ನೂ ಲೆಕ್ಕಿಸದೇ ಪಾಕಿಸ್ತಾನವು ಗುರುವಾರ ರಾತ್ರಿ ಭಾರತದ ಗಡಿ ಭಾಗದಲ್ಲಿ ಕ್ಷಿಪಣಿ ಹಾಗೂ ಡ್ರೋಣ್‌ ಮೂಲಕ ದಾಳಿಯನ್ನು ಮುಂದುವರಿಸಿದೆ. ರುವಾರ ರಾತ್ರಿ ಜಮ್ಮು, ಪಂಜಾಬ್‌ನ ಪಠಾಣ್‌ಕೋಟ್‌ ಸಹಿತ ಗಡಿ ಭಾಗದ ಹಲವೆಡೆ ಕ್ಷಿಪಣಿಗಳ ಜತೆ ಡ್ರೋಣ್‌ ಹಾರಾಡಿದ ವರದಿಯಾಗಿವೆ. ಭಾರತದ ಸೇನಾ ಪಡೆಗಳು ಇದಕ್ಕೆ ತಕ್ಕ ಉತ್ತರ ನೀಡಿವೆ ಎಂದು ವರದಿಯಾಗಿದೆ.ಸತ್ವಾರಿ, ಸಾಂಬಾ, ಆರ್ ಎಸ್ ಪುರ ಮತ್ತು ಅರ್ನಿಯಾ ಮೇಲೆ ನಿರ್ದೇಶಿಸಲಾದ 8 ಪಾಕಿಸ್ತಾನಿ ಕ್ಷಿಪಣಿಗಳನ್ನು ಭಾರತ ಗುರುವಾರ ರಾತ್ರಿ ತಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ವೇಳೆ ಸ್ಪೋಟಗಳು ಆಲ್ಲಿ ಆಗಿವೆ. ಸ್ಫೋಟದ ನಂತರ ಜಮ್ಮು ನಿವಾಸಿಗಳಲ್ಲಿ ಭೀತಿ ಉಂಟಾಗಿತ್ತು. ಹಲವು ಭಾಗದಲ್ಲಿ ಕತ್ತಲ ವಾತಾವರಣ,ಮುಗಿಲಲ್ಲಿ ಕ್ಷಿಪಣಿಗಳ ಹಾರಾಟ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಬಹುದು ಎನ್ನುವ ವಾತಾವರಣ ನಿರ್ಮ...