ಭಾರತ, ಮೇ 1 -- ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೇವಲ ಬೇಸಿಗೆ ಧಗೆಯಲ್ಲ, ಮಕ್ಕಳ ಪರೀಕ್ಷೆ ಮತ್ತು ಫಲಿತಾಂಶವೆಂಬ ಧಗೆಯೂ ಸೇರಿಕೊಳ್ಳುತ್ತದೆ. ಮಕ್ಕಳು ತೆಗೆಯುವ ಅಂಕಗಳ ಮೇಲೆ ಅವರು ಮುಂದಿನ ಜೀವನದಲ್ಲಿ ಹೇಗಿರುತ್ತಾರೆ ಎನ್ನುವ ಲೆಕ್ಕಾಚಾರ ಈ ಧಗೆಯನ್ನು ದುಪ್ಪಟ್ಟುಗೊಳಿಸುತ್ತದೆ. ಅದರಲ್ಲೂ ಮಕ್ಕಳು ಎಸ್ಎಸ್ಎಲ್ಸಿ ಅಥವಾ ದ್ವಿತೀಯಗೆ ಬಂದಿದ್ದರಂತೂ ಅಂತಹ ಮನೆಗಳಲ್ಲಿ ಪಾಲಕರ ಸ್ಥಿತಿಯನ್ನು ವಿವರಿಸಲು ಸಾಧ್ಯವಿಲ್ಲ. ಬೇಡವೇ ಈ ಒತ್ತಡ. ಅದೂ ಎಷ್ಟು ಅಂಕ ತೆಗೆದರೂ ಸಾಲದೆನ್ನುವ ಇಂದಿನ ಸಮಯದಲ್ಲಿ. ಇದೆಲ್ಲದರ ಪರಿಣಾಮ- ಒತ್ತಡವನ್ನು ಅನುಭವಿಸಲಾಗದ ವಿದ್ಯಾರ್ಥಿ ಮಾನಸಿಕವಾಗಿ ಕುಸಿಯುತ್ತಾನೆ.
ಗಮನಿಸಿ, ಈ ಪರೀಕ್ಷಾ ಫಲಿತಾಂಶಗಳು ಕೇವಲ ವಿದ್ಯಾರ್ಥಿಯ ಜೀವನದ ಭವಿಷ್ಯವನ್ನಲ್ಲದೇ ಶಾಲೆ/ಕಾಲೇಜುಗಳ ಬೇಡಿಕೆಯತ್ತಲೂ ತಮ್ಮ ಪ್ರಭಾವ ಬೀರುತ್ತವೆನ್ನುವುದನ್ನು ನಾವು ಮರೆಯುವಂತಿಲ್ಲವಲ್ಲ. ಪ್ರತಿಶತ 100 ಫಲಿತಾಂಶ ನೀಡುವುದರ ಜೊತೆಗೆ ಯಾವ ಶಾಲೆಯಲ್ಲಿ ಮಕ್ಕಳು ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾರೋ ಅಂತಹ ಶಾಲೆಗಳಿಗೆ/ಕಾಲ...
Click here to read full article from source
To read the full article or to get the complete feed from this publication, please
Contact Us.