Bengaluru, ಮೇ 8 -- ಮಂಗಳೂರು: ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲು ಸಮೀಕ್ಷೆ ಆರಂಭಗೊಂಡಿದ್ದು, ಇದೀಗ ಆದಿದ್ರಾವಿಡ ಮತ್ತು ಉಪಜಾತಿಗಳ ನಡುವೆ ಗೊಂದಲಗಳು ಎದ್ದಿವೆ ಎಂದು ಸಮುದಾಯದ ಪ್ರತಿನಿಧಿಗಳು ದೂರಿದ್ದಾರೆ. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದು, ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದಿದ್ರಾವಿಡ ಮತ್ತು ಉಪಜಾತಿಗಳ ನಡುವೆ ಎದ್ದಿರುವ ಗೊಂದಲ ಸರಿಪಡಿಸಲು ಆಡಳಿತ ಕೂಡಲೇ ಕ್ರಮ ವಹಿಸಬೇಕು. ಆದಿದ್ರಾವಿಡ ಎಂದು ಉಲ್ಲೇಖಿಸಿದರೆ, ಆಪ್ ಪ್ರೊಸೀಡ್ ಆಗುವುದಿಲ್ಲ ಎಂಬ ಮಾಹಿತಿ ಇದೆ. ಇಂಥ ಗೊಂದಲ ನಿವಾರಿಸಬೇಕು ಎಂದು ಸಮುದಾಯದ ಪ್ರತಿನಿಧಿಗಳು ದೂರಿದ್ದಾರೆ.

ಈವರೆಗೆ ಆದಿದ್ರಾವಿಡ ಎಂದು ಹೇಳಿಕೊಂಡು ಜಾತಿ ದೃಢೀಕರಣ ಪತ್ರ ಪಡೆಯುತ್ತಿದ್ದೆವು. ಆದಿದ್ರಾವಿಡ ಜಾತಿಯಲ್ಲ. ಅದೊಂದು ಅನೇಕ ಜಾತಿಗಳ ಸಮೂಹ ಎಂದು ಮಾಧ್ಯಮಗಳಿಗೆ ತಿಳಿಸಿರುವ ಮುಖಂಡ ಮೋಹನಚಂದ್ರ ಕಾಳಾವರ, ಒಳಮೀಸಲಾತಿ ವಿಚಾರ ಬಂದಾಗ ನಾವು ನಮ್ಮ ಮೂಲಜಾತಿಯನ್ನೇ ಉಲ್ಲೇಖಿಸಬೇಕು. 98 ಉಪಜಾತಿಗಳು ಬರುತ್ತವೆ. ಕೇವಲ ಆದಿದ್ರಾವಿಡ ಎಂದು ಹೇಳಿ, ತಮ್ಮ...