ಭಾರತ, ಮೇ 27 -- ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು (ಮೇ 27) ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡ ಹಿರಿಯ ನಟ ಅನಂತ ನಾಗ್, ರಿಕಿ ಕೇಜ್ ಸೇರಿ 71 ಸಾಧಕರಿಗೆ ಪದ್ಮ ಪುರಸ್ಕಾರ ಪ್ರಧಾನ ಮಾಡಿದರು. ಈ ಸಲ 7 ಸಾಧಕರಿಗೆ ಪದ್ಮವಿಭೂಷ, 19 ಸಾಧಕರಿಗೆ ಪದ್ಮಭೂಷಣ, 113 ಸಾಧಕರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ. ಈ ಪೈಕಿ ಕರ್ನಾಟಕದ 9 ಸಾಧಕರಿದ್ದು, ವಯೋಲಿನ್ ವಾದಕ ಎಲ್ ಸುಬ್ರಮಣಿಯಂ ಪದ್ಮವಿಭೂಷಣ, ನಟ ಅನಂತನಾಗ್ ಮತ್ತು ಹಿರಿಯ ಪತ್ರಕರ್ತ ಎ ಸೂರ್ಯ ಪ್ರಕಾಶ್ ಅವರಿಗೆ ಪದ್ಮಭೂಷಣ ಪುರಸ್ಕಾರ ಲಭಸಿದೆ.
ಕನ್ನಡದ ಹಿರಿಯ ನಟ ಅನಂತನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು.
ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಪದ್ಮ ಪುರಸ್ಕಾರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದರು.
ಕಥಕ್ ನೃತ್ಯಗಾತಿ ಕುಮುದಿನಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ ಶಾರದಾ ಸಿನ್ಹಾ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
...
Click here to read full article from source
To read the full article or to get the complete feed from this publication, please
Contact Us.