Bangalore, ಜನವರಿ 26 -- ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಈ ಕುರಿತು ಹಿರಿಯ ನಟ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಖುಷಿ ತಂದಿದೆ. ಕನ್ನಡಿಗರು ಇದಕ್ಕಾಗಿ ಅಭಿಯಾನ ಮಾಡಿದ್ದರು. ಈ ಹಿಂದೆ ಪದ್ಮಭೂಷಣ ಪ್ರಶಸ್ತಿ ನೀಡುವ ರೀತಿ ಬೇರೆ ಇತ್ತು. ಮೂರು ವರ್ಷದ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದರಲ್ಲಿ ಸಾರ್ವಜನಿಕರು ಹೆಚ್ಚು ಪಾಲ್ಗೊಳ್ಳಬೇಕು ಎಂದು ಘೋಷಣೆ ಮಾಡಿದರು. ಆ ಘೋಷಣೆ ಬಂದ ನಂತರ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಅಭಿಯಾನ ನಡೆಸಿ ನನ್ನ ಹೆಸರು ಸೂಚಿಸಿದ್ದರು. ಯಾರೂ ತಮ್ಮ ತಮ್ಮ ಹೆಸರು ಸೂಚಿಸಿಲ್ಲ, ಅಷ್ಟೊಂದು ನಿಸ್ವಾರ್ಥಿಗಳು, ಕನ್ನಡಿಗರ ಪ್ರೀತಿ ದೊಡ್ಡದು. ಆ ವರ್ಷ ಪ್ರಶಸ್ತಿ ಬರಲಿಲ್ಲ. ಅದರ ನಂತರ ವರ್ಷವೂ ಇದೇ ರೀತಿ ಮಾಡಿದರು. ಮೂರು ವರ್ಷದಿಂದ ಸತತವಾಗಿ ಈ ರೀತಿಯ ಅಭಿಯಾನ ಮಾಡಿದ್ದಾರೆ. ನನಗೆ ಬಂತು ಅಥವಾ ಬರಲಿಲ್ಲ ಎಂಬ ಸುಖವೂ ಇಲ್ಲ ದುಃಖವೂ ಇಲ್ಲ. ಆದರೆ, ನನಗಾಗಿ ಅಭಿಯಾನ ಮಾಡಿದ ಕನ್ನಡಿಗರಿಗೆ ಖುಷಿಯಾಗುತ್ತದೆ ಎನ್ನುವುದು ನನಗೆ ಸಂತೋಷ ತಂದಿದೆ" ಎಂದು...
Click here to read full article from source
To read the full article or to get the complete feed from this publication, please
Contact Us.