Bengaluru, ಏಪ್ರಿಲ್ 24 -- ಸೀತಾ ರಾಮ ಧಾರಾವಾಹಿ ಅಂತ್ಯದ ಸನಿಹ ಬಂದಂತಿದೆ. ಇನ್ನೇನು ಭಾರ್ಗವಿಯ ಇನ್ನೊಂದು ಮುಖ ಎಲ್ಲರ ಮುಂದೆ ಕಳಚುವ ಸಮಯ ಹತ್ತಿರ ಬಂದಿದೆ.

ಇಲ್ಲಿಯವರೆಗೂ ಸಿಹಿಯ ಆತ್ಮ ಇರುವುದು ಕೇವಲ ಸುಬ್ಬಿಗೆ ಮಾತ್ರ ಗೊತ್ತಿತ್ತು. ಇದೀಗ ಆ ಆತ್ಮ ಇರುವುದು ಅಶೋಕನ ಅರಿವಿಗೆ ಬಂದಿದೆ. ಅಶೋಕನಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾಳೆ.

ಈ ನಡುವೆ ಸಿಹಿಯ ಸಾವಿಗೆ ಕಾರಣ ಏನೆಂಬುದು ಇದೀಗ ಮುನ್ನೆಲೆಗೆ ಬಂದಿದೆ. ಈ ವಿಚಾರವನ್ನು ಸ್ವತಃ ಸಿಹಿ, ಸುಬ್ಬಿಯ ಮೂಲಕ ಅಶೋಕನ ಗಮನಕ್ಕೆ ತಂದಿದ್ದಾಳೆ.

ಸಿಹಿಯದ್ದು ಆಕ್ಸಿಡೆಂಟ್‌ ಅಲ್ಲ ಎಂಬ ವಿಚಾರ ರಾಮ್‌ಗೆ ಹೇಳಿದ್ರೆ ಆತ ನಂಬಲ್ಲ. ಹಾಗಾಗಿ ಏಣು ಮಾಡಬೇಕು ಎಂದಾಗ, ಸಿಹಿಯೇ ತನ್ನ ಕೈಯಾರೆ ಪತ್ರವೊಂದನ್ನು ಬರೆದಿದ್ದಾಳೆ.

ಆ ಪತ್ರದಲ್ಲಿ ಹೀಗೆ ಬರೆದಿದ್ದಾಳೆ. ನಾನು ಆಕ್ಸಿಡೆಂಟ್‌ ಆಗಿ ಸತ್ತಿಲ್ಲ. ನನ್ನನ್ನ ಬೇಕು ಅಂತ ಸಾಯ್ಸಿದ್ದಾರೆ. ನನ್ನ ಸಾವಿಗೆ ಕಾರಣ ಯಾರು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ ಎಂದಿದ್ದಾಳೆ.

ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಎಂದು ಅಶೋಕ್‌ ರಾಮನಿಗೆ ಹೇಳುತ್...