ಭಾರತ, ಮಾರ್ಚ್ 28 -- ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ಸ್ಮರಣಾರ್ಥ ಏಪ್ರಿಲ್ 4 ರಂದು 'ಖಾಸ್ ಗೀತ್' ಎಂದೂ ಮರೆಯದ ಹಾಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪತ್ರಕರ್ತ ಅಜಿತ್ ಹನುಮಕ್ಕನವರ್ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಹಳೆಯ ಹಿಂದಿ- ಕನ್ನಡ ಇತರ ಪ್ರಾದೇಶಿಕ ಭಾಷೆಯ ಹಾಡುಗಳು ಈ ದಿನ ನಿಮ್ಮ ಕಿವಿಗಳನ್ನು ಇಂಪಾಗಿಸಲಿವೆ. ರಾಮಚಂದ್ರ ಹಡಪದ, ಹರ್ಷ ರಂಜಿನಿ ಹಾಗೂ ಸ್ಪರ್ಶ ಆರ್‌ಕೆ ಹಾಡುಗಳಿಗೆ ಧ್ವನಿಯಾಗಲಿದ್ದಾರೆ. ಒಟ್ಟು ಮೂರು ಗಂಟೆಗಳ ಕಾರ್ಯಕ್ರಮ ಇದಾಗಲಿದ್ದು, ಸಂಜೆ 5.30ಕ್ಕೆ ಆರಂಭವಾಗಲಿದೆ. ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಟಿಕೇಟ್ ಖರೀದಿ ಮಾಡಬೇಕಾಗುತ್ತದೆ. ಈ ಕೆಳಗಿನ ಲಿಂಕ್ ಮೂಲಕ ನೀವು ಟಿಕೆಟ್ ಖರೀದಿ ಮಾಡಬಹುದು. https://in.bookmyshow.com/events/endu-mareyada-haadu/ET00439003?webview=true . ಪ್ರಾರ್ಥನಾ.ವರ್ಲ್ಡ್ ಶಾಲೆ, ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಪರಮಪದ ಈ ಮೂರೂ ಸಹಭಾಗಿತ್...