ಭಾರತ, ಮೇ 19 -- ಕಳೆದ ವರ್ಷ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌, ಇದೀಗ ಕೊಂಚ ನಿರಾಳರಾಗಿದ್ದಾರೆ. ಜಾಮೀನು ಪಡೆದು ತಮ್ಮ ವೈಯಕ್ತಿಕ ಮತ್ತು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿಯೂ ದರ್ಶನ್‌ ಭಾಗವಹಿಸಿ, ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣವೂ ಮುಕ್ತಾಯವಾಗಿದೆ. ಇದೀಗ ಗ್ಯಾಪ್‌ನಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಅಂದಹಾಗೆ ಮೇ 19ರ 2003 ರಲ್ಲಿ ನಟ ದರ್ಶನ್‌, ವಿಜಯಲಕ್ಷ್ಮೀ ಅವರ ಜತೆ ದಾಂಪತ್ಯಕ್ಕೆ ಕಾಲಿರಿಸಿದ್ದರು. ಇದೀಗ ಇದೇ ಜೋಡಿಯ ಮದುವೆಯಾಗಿ 25 ವರ್ಷಗಳಾಗಿವೆ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿ ಬರಮಾಡಿಕೊಂಡಿದೆ ಈ ಜೋಡಿ.

ಇಲ್ಲೆಲ್ಲೋ ಬೆಂಗಳೂರೋ ಅಥವಾ ಮೈಸೂರಿನಲ್ಲೋ ಈ ಜೋಡಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿಲ್ಲ. ಬದಲಿಗೆ ದೂರದ ಬಾಲಿಯಲ್ಲಿ ಸೆಲೆಬ್ರೇಟ್‌ ಮಾಡಿದೆ.

ಮುದ್ದು ರಾಕ್ಷಸಿ ಹಾಡಿಗೆ ದರ್ಶನ್‌ ಮತ್ತು ವಿಜಯ್‌ ಲಕ್ಷ್ಮೀ ಡಾನ್ಸ್‌ ಸಹ ಮಾಡಿದ್ದಾರೆ. ಇದೇ ವೇಳೆ ಕೆಲವು ಆಪ್ತರು ಈ ಜೋಡಿಯ...