Hubli, ಏಪ್ರಿಲ್ 3 -- Trishula Deeksha: ಹುಬ್ಬಳ್ಳಿ ನಗರದ ನೇಹಾ ಹಿರೇಮಠ ಹತ್ಯೆಯಾಗಿ ಏಪ್ರಿಲ್ 17 ಕ್ಕೆ ಒಂದು ವರ್ಷ ಆಗುತ್ತಿದೆ. ಇಂತಹ ಘಟನೆಗಳು ಮರುಕಳಿಸುತ್ತಿರುವ ಕಾರಣ ಮಹಿಳೆಯರಿಗೆ ಸ್ವಯಂ ರಕ್ಷಣೆಗಾಗಿ ತ್ರಿಶೂಲ ಜತೆಗೆ ಇರಿಸುವಂತೆ ಸಲಹೆ ನೀಡಿರುವ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಂದು (ಏಪ್ರಿಲ್ 17) ಶ್ರೀರಾಮಸೇನೆಯಿಂದ 1000 ಮಹಿಳೆಯರಿಗೆ ತ್ರಿಶೂಲ ದಿಕ್ಷೆ ನೀಡಲಾಗುವುದು ಎಂದು ಹೇಳಿದರು.

ಕುಂದಗೋಳ ಪಟ್ಟಣದ ಸಿರಾಜ್ ಎಂಬ ಯುವಕನಿಂದ ಹಲ್ಲೆಗೊಳಗಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಆರೋಗ್ಯ ವಿಚಾರಿಸಿದ ಪ್ರಮೋದ್ ಮುತಾಲಿಕ ಅವರು ಕೆಲ ಹೊತ್ತು ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರು ಬಂದರೆ ಚುಚ್ಚಿ ಬಿಡಿ. ಕಾಂಗ್ರೆಸ್ ಸರ್ಕಾರ ಮಹಿಳೆಯರ ರಕ್ಷಣೆ ಮಾಡಲ್ಲ. ಕಾಂಗ್ರೆಸ್ ಇರೋದು ಮುಸ್ಲಿಂರ ರಕ್ಷಣೆಗಾಗಿ, ಅವರ ಓಟ್‌ಗಾ...