Bantwal,Mangaluru, ಮೇ 5 -- ಕರ್ನಾಟಕದಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ನಡೆದ ಅತಿರುದ್ರ ಮಹಾಯಾಗ ಋತ್ವಿಜರ ರುದ್ರಪಠಣ, ಸಂತರ ಉಪಸ್ಥಿತಿಯೊಂದಿಗೆ ನೆರವೇರಿತು. ಈ ಮಹಾಯಾಗದ ವಿವರ ಸಹಿತ ಚಿತ್ರನೋಟ ಹೀಗಿದೆ.

ಮೊಗರ್ನಾಡು ಸಾವಿರ ಸೀಮೆಯ ನಿಟಿಲಾಪುರದಲ್ಲಿ ಕಾಶಿ ಸಂಸ್ಥಾನ ಮಠಾಧೀಶ್ವರ 1008 ಜಗದ್ಗುರು ಪೀಠ ವಾರಣಾಸಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಯಾಗ ನಡೆಯಿತು. (ಸಾಂಕೇತಿಕ ಚಿತ್ರ)

ಅತಿರುದ್ರ ಮಹಾಯಾಗದ ನಿಮಿತ್ತ ಮಾರ್ಚ್ 30ರಂದು ಯುಗಾದಿಯ ದಿನವೇ ರುದ್ರಪಾರಾಯಣ ಆರಂಭಗೊಂಡಿದ್ದು, 14,641ಕ್ಕೂ ಅಧಿಕ ಬಾರಿ ರುದ್ರಪಾರಾಯಣವು ನಡೆದಿದ್ದು, ಶ್ರೀ ರುದ್ರದೇವರಿಗೆ ಸಮರ್ಪಿತವಾದವು. ಈ ಸಂದರ್ಭ ಯಜ್ಞಕುಂಡಗಳಲ್ಲಿ ಸುವಸ್ತುಗಳಿಂದ ಹವಿಸ್ಸನ್ನು ಅರ್ಪಿಸಲಾಯಿತು.

ಜಗದ್ಗುರು ಕಾಶಿಪೀಠ ವಾರಣಾಸಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಅಂಜ...