Bangalore, ಮೇ 4 -- ಎಸ್‌ಎಸ್‌ಎಲ್‌ಸಿ ಟಾಪರ್‌ ಸಂದರ್ಶನ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಬೇಕಿದ್ರೆ ಊಟನಿದ್ರೆ ಬಿಟ್ಟು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಓದಬೇಕೆಂದು ಸಾಕಷ್ಟು ಜನರು ಹೇಳುತ್ತಿರಬಹುದು. ಆದರೆ, ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಿರುವ ಚಿತ್ರದುರ್ಗದ ನಂದನ್‌ ಎಚ್‌ಒ ಕಲಿಕಾ ಕ್ರಮವೇ ವಿಭಿನ್ನ ಮತ್ತು ಸ್ಪೂರ್ತಿದಾಯಕ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ನಡೆಸಿದ ಸಂದರ್ಶನದಲ್ಲಿ ನಂದನ್‌ ಎಚ್‌ಒ ತನ್ನ ಎಸ್‌ಎಸ್‌ಎಲ್‌ಸಿ ಸಾಧನೆಯ ಕುರಿತು ಮಾತನಾಡಿದ್ದಾರೆ. ಇವರು ಚಿತ್ರದುರ್ಗದ ಹಿರಿಯೂರು ಬಳಿಯ ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್‌ ಮೀಡಿಯಾಂ ಹೈಸ್ಕೂಲ್‌ ವಿದ್ಯಾರ್ಥಿ.

"ವೇಳಾಪಟ್ಟಿ ಅಂತ ಏನೂ ಇರಲಿಲ್ಲ. ನಮಗೆ ಡೈಲಿ ಟೆಸ್ಟ್‌ ಇರುತ್ತಿತ್ತು. ಅದಕ್ಕೆ ಸಿದ್ಧತೆ ನಡೆಸುತ್ತಿದ್ದೇವು. ಕಾನ್ಸೆಪ್ಟ್‌ ಮೇಲೆ ಹೆಚ್ಚು ಫೋಕಸ್‌ ಮಾಡುತ್ತಿದ್ದೇವು. ಎಷ್ಟು ಗಂಟೆ ಓದಿದ್ದೇವು ಎನ್ನುವುದಕ್ಕಿಂತ ಒಂದೊಂದು ಕಾನ್ಸೆಪ್ಟ್‌ ಅರ್ಥ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದ್ದೇವು. ಒಂದು ಕಾನ್ಸೆ...