Haveri, ಮೇ 23 -- ಹಾವೇರಿ: ಮೂರು ವಾರದ ಹಿಂದೆ ಕರ್ನಾಟಕದಲ್ಲಿ ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಮಾಕನೂರು ಮೊರಾರ್ಜಿ ಶಾಲೆಯ ವಿದ್ಯಾರ್ಥಿ ಪೃತ್ವೀಶ್ ಗೊಲ್ಲರಹಳ್ಳಿಗೆ ತಾನೂ ಟಾಪರ್‌ ಆಗಬೇಕಿತ್ತು ಎನ್ನುವ ಅಭಿಪ್ರಾಯ ಮೂಡಿತು. ಎಲ್ಲಾ ವಿಷಯದಲ್ಲಿ ಪೂರ್ಣ ಅಂಕ ಬಂದಿದ್ದರೂ ವಿಜ್ಞಾನದಲ್ಲಿ ಮಾತ್ರ ಮೂರು ಅಂಕ ಕಡಿಮೆಯಾಗಿ ಟಾಪರ್‌ ಆಗುವುದು ತಪ್ಪಿತ್ತು. ಕೊನೆಗೆ ಉತ್ತರ ಪತ್ರಿಕೆ ಪಡೆದಾಗ ಎರಡು ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದಿದ್ದರೂ ಮೂರು ಕಡಿಮೆ ಅಂಕವನ್ನು ಮೌಲ್ಯಮಾಪಕರು ನೀಡಿದ್ದರು. ಶಿಕ್ಷಕರೂ ಮರು ಮೌಲ್ಯಮಾಪನಕ್ಕೆ ಹಾಕು ಎನ್ನುವ ಅಭಿಪ್ರಾಯ ನೀಡಿದರು. ಅದರಂತೆ ಮರು ಮೌಲ್ಯಮಾಪನಕ್ಕೆ ಹಾಕಿದರೆ ಮೂರು ಅಂಕಗಳು ಲಭಿಸಿ ಈಗ ವಿಜ್ಞಾನದಲ್ಲೂ ನೂರಕ್ಕೆ ನೂರು ಅಂಕ ಬಂದಿದೆ. ಪ್ರತ್ವೀಶ್‌ ಬಯಕೆಯಂತೆ ಈಗ ಆತ ಟಾಪರ್. ಅದೂ ಕರ್ನಾಟಕದಲ್ಲಿ ಮೊರಾರ್ಜಿ ಶಾಲೆಯಲ್ಲಿ ಓದಿದ ಯಾವೊಬ್ಬ ವಿದ್ಯಾರ್ಥಿಯೂ ಈ ವರ್ಷ ಟಾಪರ್‌ ಆಗಿರಲಿಲ್ಲ. ಪ್ರತ್ವೀಶ್‌ಗೆ ಖುಷಿ. ಮೌಲ್ಯಮಾಪನ ಮಾಡಿದ ಶಿ...