Mysuru, ಮೇ 27 -- ಮೈಸೂರು: ಆತ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿ ಖುಷಿಯಲ್ಲಿದ್ದ. ಎಲ್ಲರಂತೆ ಬದುಕು ನಡೆಸಿಕೊಂಡು ಹೋಗಬೇಕು ಎನ್ನುವ ಉಮೇದಿನಲ್ಲಿಯೂ ಇದ್ದ. ಆದರೆ ದುರಾದೃಷ್ಟವಶಾತ್‌ ಹಾಗೆ ಅಗಲೇ ಇಲ್ಲ. ಜಮೀನಿನ ಬಳಿ ಮೇಕೆ ಮೇಯಿಸಲು ಹೋಗಿದ್ಧಾಗ ಏಕಾಏಕಿ ವ್ಯಾಘ್ರ ಮಾಡಿ ಕೊಂದು ಹಾಕಿತ್ತು. ಯುವಕನ ಚೀರಾಟ ಕೇಳಿ ಸಮೀಪದ ಜಮೀನಿನಲ್ಲಿಯೇ ಕೆಲಸ ಮಾಡುತ್ತಿದ್ದ ತಂದೆ ತಾಯಿ ಬರುವಷ್ಟರ ಹೊತ್ತಿಗೆ ಹುಲಿ ದಾಳಿ ಮಾಡಿ ಅಲ್ಲಿಂದ ಕಾಲ್ಕಿತ್ತಿತ್ತು. ಕೊನೆಗೆ ಆಸ್ಪತ್ರೆಗೆ ಸಾಗಿಸಿದರೂ ಆಗಲೇ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಶತಮಾನಗಳಿಂದ ಅರಣ್ಯ ಪ್ರದೇಶ ಹಾಗೂ ನೆರೆ ಹೊರೆಯಲ್ಲಿಯೇ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಹುಲಿ ದಾಳಿಯಿಂದ ಮಗನನ್ನು ಕಳೆದುಕೊಂಡ ಆಕ್ರಂದನ. ಈಗಷ್ಟೇ ಮದುವೆಯಾಗಿ ಪತಿಯೊಂದಿಗೆ ಬಾಳುವ ಕನಸು ಕಂಡಿದ್ದ ಯುವತಿಗೂ ಬರಸಿಡಿಲು ಬಂದಂತಹ ಸನ್ನಿವೇಶ.ಇದು ನಡೆದಿರುವುದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗುರುಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ನಾಗಾಪುರ-5ನೇ ಬ್ಲಾಕ್‌ನ ಪಕ್ಕದ ಸೊಳ್ಳ...