Bengaluru, ಮೇ 5 -- ಪ್ರಶಾಂತ ವಸತಿ ಪ್ರದೇಶಕ್ಕೆ ಹೆಸರಾಗಿದ್ದ ಜಯನಗರವನ್ನು ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದು ವಿಷಾದಿಸುವ ಬೆಂಗಳೂರು ನಿವಾಸಿಯೊಬ್ಬರ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ. ಅದರ ಪರಿಣಾಮವಾಗಿ ಹಿಂದಿನ ತಲೆಮಾರುಗಳು ನಿರ್ಮಿಸಿದ ಒಂದು ಕಾಲದಲ್ಲಿ ಶಾಂತವಾಗಿದ್ದ ಪ್ರದೇಶವನ್ನು ಈಗ ವಾಣಿಜ್ಯೀಕರಣ ಮತ್ತು ರಿಯಲ್ ಎಸ್ಟೇಟ್ ದುರಾಸೆಯಿಂದ ಹೇಗೆ ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂಬುದನ್ನು ಜಯನಗರ ನಿವಾಸಿಯೊಬ್ಬರು ವಿವರಿಸಿದ್ದಾರೆ.

ಎಕ್ಸ್‌ನಲ್ಲಿ ವೈರಲ್ ಆದ ಪೋಸ್ಟ್‌‌‌‌ನಲ್ಲಿ ಬಳಕೆದಾರರೊಬ್ಬರು ಹೀಗೆ ಹೇಳಿದ್ದಾರೆ, "ಒಂದು ಕಾಲದಲ್ಲಿ ಶಾಂತಿಯುತ ವಸತಿ ಪ್ರದೇಶವಾದ ಜಯನಗರವು ಜನನಿಬಿಡ, ಗದ್ದಲ ಮತ್ತು ಧೂಳು ತುಂಬಿದ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಜೀವನದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪೂರ್ವಜರು ಎಲ್ಲವನ್ನೂ ಮಕ್ಕಳಿಗಾಗಿ ಮಾಡಿಟ್ಟಿದ್ದರು. ಆದರೆ ನಂತರದ ತಲೆಮಾರುಗಳು ಹಣದ ಹಿಂದೆ ಹೋಗಿ ಅದನ್...