ಭಾರತ, ಮೇ 12 -- ದೆಹಲಿ: ಯಾವುದೇ ಕಾರಣಕ್ಕೂ ನಮ್ಮ ಸೇನಾಪಡೆಗಳ ಕಾರ್ಯಾಚರಣೆ ನಿಲ್ಲೋದಿಲ್ಲ. ನಮ್ಮ ಎಲ್ಲಾ ಸೇನಾನೆಲೆಗಳು, ಯುದ್ಧೋಪಕರಣಗಳು ಮುಂದಿನ ಕಾರ್ಯಾಚರಣೆಗೆ ಸನ್ನದ್ಧವಾಗಿವೆ. ಈಗಾಗಲೇ ಒಂದು ವಾರದಿಂದಲೂ ಸೇನಾ ಪಡೆಗಳು ಪಾಕಿಸ್ತಾನದ ಭಯೋತ್ಪಾದಕರ ಚಟುವಟಿಕೆ ವಿರುದ್ದ ಕಾರ್ಯಾಚರಣೆವನ್ನು ಮುಂದುವರೆಸುತ್ತೇವೆ. ಈಗಾಗಲೇ ಆಪರೇಷನ್‌ ಸಿಂದೂರ್‌ ಸಹಿತ ಎಲ್ಲಾ ರೀತಿಯ ಸೇನಾ ಕಾರ್ಯಾಚರಣೆಗಳು ಮುಂದುವರೆಸುವ ನಿರ್ಧಾರ ಆಗಿರುವುದರಿಂದ ಎಲ್ಲರೂ ಸಕ್ರಿಯರಾಗಿ ಭಾಗಿಯಾಗಲಿದ್ದಾರೆ. ಈಗಾಗಲೇ ಎಲ್ಲಾ ರಕ್ಷಣಾ ಪಡೆಗಳಿಗೂ ಸೂಚನೆ ನೀಡಲಾಗಿದೆ. ಪಾಕಿಸ್ತಾನದ ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಭಾರತ ಸರ್ವಸನ್ನದ್ದವಾಗಿದೆ. ಇದಕ್ಕಾಗಿ ಅತ್ಯಾಧುನಿಕ ಕ್ಷಿಪಣಿ, ವ್ಯವಸ್ಥಿತ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದು ಭಾರತದ ಸೇನಾ ಪಡೆಗಳ ಮುಖ್ಯಸ್ಥರ ಸ್ಪಷ್ಟನುಡಿ.ಈಗಾಗಲೇ ಅಮೆರಿಕಾದ ಮಧ್ಯಸ್ಥಿಕೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇದರ ನಡುವೆಯೂ ಪಾಕಿಸ್ತಾನ ದಾಳಿ ಮುಂದುವರಿಸಿದ್ದು. ಭಾರತ ತಿರುಗೇಟು...