ಭಾರತ, ಏಪ್ರಿಲ್ 27 -- ಅಂದು ಸಂಜೆ ತಾನೇ ನೀವು ನಿಮ್ಮ ಮನೆಯಲ್ಲಿ ಮಂತ್ರಾಲಯಕ್ಕೆ ಹೋಗುವ ಮಾತನಾಡಿರುತ್ತೀರಿ. ರಾತ್ರಿ ನಿಮ್ಮ ಫೇಸ್‌ಬುಕ್‌ ಫೀಡ್‌ನಲ್ಲಿ ರಾಯರ ಫೋಟೋ ಕಾಣಿಸುತ್ತದೆ. ಓಹ್ ಇದೇನು ಆಶ್ಚರ್ಯ ಎಂದುಕೊಂಡು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದರೆ ಮಂತ್ರಾಲಯದ ಬಗ್ಗೆ ಲೇಖನ. ಮಾರನೆಯ ದಿನ ಬಸ್ಸಿನಲ್ಲಿ ಯಾರೋ ರಾಘವೇಂದ್ರರ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಆಫೀಸಿನ ಕಲೀಗ್ ಕಂಪ್ಯೂಟರ್‌ನಲ್ಲೂ ರಾಯರ ಸ್ಕ್ರೀನ್ ಸೇವರ್. ಓಹೋ! ಏನಿದು ಎಲ್ಲೆಡೆ ರಾಯರೇ ಕಾಣ್ತಿದಾರೆ ಏನಪ್ಪ ರಾಯರ ಲೀಲೆ .

ಅಂದು ಬೆಳಿಗ್ಗೆ ಕೋಮುಗಲಭೆಯ ವರದಿಯೊಂದನ್ನು ಓದಿರುತ್ತೇವೆ. ನಂತರ ನಾವು ನೋಡುವ ಸೋಷಿಯಲ್ ಮೀಡಿಯಾ, ಪತ್ರಿಕೆಗಳಲ್ಲಿ ಅದೇ ತರಹದ ಬೇರೆಬೇರೆ ಸುದ್ದಿಗಳು. ದೇಶದಲ್ಲಿ ಕೋಮುಗಲಭೆಗಳು ಜಾಸ್ತಿಯಾಗುತ್ತಿವೆ ಅನ್ನಿಸುತ್ತಿದೆ. ನೀವು ಕೆಂಪುಬಣ್ಣದ ಸ್ವಿಫ್ಟ್ ಕಾರ್ ಕೊಳ್ಳುವ ಬಗ್ಗೆ ಯೋಚಿಸಿರುತ್ತೀರಿ ಅಂದುಕೊಳ್ಳೋಣ. ನಂತರ ರಸ್ತೆಯಲ್ಲಿ ನಿಮಗೆ ಕೆಂಪು ಬಣ್ಣದ ಕಾರ್ ಅಥವಾ ಸ್ವಿಫ್ಟ್ ಕಾರ್ ಹೆಚ್ಚೆಚ್ಚು ಕಾಣಿಸುತ್ತವೆ. ನೀವು ಬುಕ್ ಪಬ್...