ಭಾರತ, ಮೇ 11 -- ಪಹಲ್ಗಾಮ್‌ ದಾಳಿಗೆ ಪ್ರತ್ಯುತ್ತರವಾಗಿ ಆಪರೇಷನ್‌ ಸಿಂದೂರ ಹೆಸರಿನಲ್ಲಿ ಭಾರತವು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಪಾಕಿಸ್ತಾನವು ಭಾರತ ಗಡಿಭಾಗಗಳಲ್ಲಿ ಪ್ರತಿದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ವಿಶ್ವದ ದೊಡ್ಡಣ ಅಮೆರಿಕ ಮಧ್ಯಪ್ರವೇಶದಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಕದನ ವಿರಾಮದ ಬಳಿಕ ಪಾಕಿಸ್ತಾನವು ಇದು ನಮ್ಮ ಐತಿಹಾಸಿಕ ಗೆಲುವು ಎಂದು ಹೇಳಿಕೊಂಡಿದೆ. ಆದರೆ ಈ ಗೆಲುವು ಭಾರತದ್ದು, ಇದು ರಾಷ್ಟ್ರಯುದ್ಧ, ಧರ್ಮಯುದ್ಧವಲ್ಲ; ಮಾನಸಿಕವಾಗಿಯೂ ನೈತಿಕವಾಗಿಯೂ ಈ ಗೆಲುವು ಇಡೀ ಭಾರತ ದೇಶದ್ದು ಎಂದಿದ್ದಾರೆ ಲೇಖಕ ಮಧು ವೈಎನ್‌. ಭಾರತ-ಪಾಕ್‌ ಕದನ ವಿರಾಮ ಹಾಗೂ ಸಂಘರ್ಷದ ಬಗ್ಗೆ ತಮ್ಮ ನಿಲುವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಮಧು, ಅವರ ಬರಹವನ್ನು ನೀವೂ ಓದಿ.

ಕದನ ವಿರಾಮ ಘೋಷಿಸಿದ ನಂತರ, ಅದರ ಉಲ್ಲಂಘನೆಯೂ ಆದ ನಂತರ ರಾತ್ರಿ ಹನ್ನೊಂದುವರೆಗೆ ಪಾಕ್ ಪ್ರಧಾನಿ ಪ್ರೆಸ್ ಕಾನ್ಫರೆನ್ಸ್...