ಭಾರತ, ಮೇ 12 -- ಬೆಂಗಳೂರು: ದುಷ್ಕರ್ಮಿಗಳು ನಟ್ಟ ನಡುರಾತ್ರಿ ಬಾಂಬ್ ಬೆದರಿಕೆ ಹಾಕಿದ ಕಾರಣ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 12628) ಸಂಚಾರ 3 ಗಂಟೆ ತಡವಾಯಿತು. ಭಾನುವಾರ ನಸುಕಿನ ವೇಳೆ ಅಂದರೆ 1.05ರ ಸುಮಾರಿಗೆ ಬಾಂಬ್ ಬೆದರಿಕೆ ಕರೆಯನ್ನು ಅಧಿಕಾರಿಗಳು ಸ್ವೀಕರಿಸಿದ್ದರು. ಈ ಕೇಸ್ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಭಾನುವಾರ ನಸುಕಿನಲ್ಲಿ ಈ ಬೆದರಿಕೆ ಕರೆ ಬಂದ ಕಾರಣ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಸೋಲಾಪುರ ಪೊಲೀಸ್ ಠಾಣೆಗೆ 112 ಸಹಾಯವಾಣಿ ಸಂಖ್ಯೆ ಮೂಲಕ ತುರ್ತು ಕರೆ ಹೋಗಿದೆ. ಕರೆ ಮಾಡಿದವರು ಕರ್ನಾಟಕ ಎಕ್ಸ್ಪ್ರೆಸ್ ರೈಲಿನ ಹಿಂಬದಿಯ ಜನರಲ್ ಬೋಗಿಯಲ್ಲಿ ಬಾಂಬ್ ಇದೆ ಎಂದು ತಿಳಿಸಿದ್ದರು. ಕ್ಷಿಪ್ರವಾಗಿ ಸ್ಪಂದಿಸಿದ ಪೊಲೀಸರು, ಸೋಲಾಪುರದ ಡಿವಿಷನಲ್ ಸೆಕ್ಯೂರಿಟಿ ಕಂಟ್ರೋಲ್ ರೂಮ್ ಸಿಬ್ಬಂದಿಯನ್ನು ಜಾಗೃತಗೊಳಿಸಿದರು. ಅಲ್ಲಿಂದ ಬೆಂಗಳೂರಿನ ರೈಲ್ವೆ ಪೊಲೀಸರು, ಕಲಬುರಗಿ ನಗರ, ಗ್ರಾಮಾಂತರ ಪೊಲೀಸರು...
Click here to read full article from source
To read the full article or to get the complete feed from this publication, please
Contact Us.