ಭಾರತ, ಮಾರ್ಚ್ 12 -- Actress Soundarya death controversy: ನಟಿ ಸೌಂದರ್ಯ ಸಾವಿನ ಕುರಿತು ಸಾಕಷ್ಟು ಊಹಾಪೋಹಗಳಿವೆ. ಅಪಘಾತದಿಂದ ಸತ್ತರು ಎಂದು ಕೆಲವರು ಹೇಳಿದರೆ, ಇಲ್ಲ ಇದು ಕೊಲೆ ಎಂದು ವದಂತಿಗಳಿದ್ದವು. ಆದರೆ, ನಟಿ ಸೌಂದರ್ಯ ಮೃತಪಟ್ಟ ಬರೋಬ್ಬರಿ 22 ವರ್ಷಗಳ ಬಳಿಕ, ಇದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ಆಂಧ್ರಪ್ರದೇಶದ ಖಾಮಮ್‌ ಜಿಲ್ಲೆಯಲ್ಲಿ ದೂರು ದಾಖಳಿಸಲಾಗಿದೆ. "ನಟಿ ಸೌಂದರ್ಯಳದ್ದು ಆಕಸ್ಮಿಕ ಸಾವಲ್ಲ. ಇದು ಆಸ್ತಿಗಾಗಿ ನಡೆದ ಕೊಲೆ. ಇದರಲ್ಲಿ ಖ್ಯಾತ ನಟ ಮೋಹನ್‌ ಬಾಬು ಕೈವಾಡವಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರುದಾರರನ್ನು ಚಿಟ್ಟಿಮಲ್ಲು ಎಂದು ಉಲ್ಲೇಖಿಸಲಾಗಿದೆ."ಸೌಂದರ್ಯ ಮತ್ತು ಆಕೆಯ ಸಹೋದರ ಜಲ್‌ಪಳ್ಳಿ ಗ್ರಾಮದಲ್ಲಿರುವ ಆರು ಎಕರೆ ಭೂಮಿಯನ್ನು ಮೋಹನ್‌ ಬಾಬುಗೆ ಮಾರಾಟ ಮಾಡಲು ನಿರಾಕರಿಸಿದ್ದರು. ಇದಾದ ಬಳಿಕ ಇವರ ನಡುವೆ ಸಾಕಷ್ಟು ಜಗಳವಾಗಿದೆ. ವಿಮಾನ ದುರಂತ ಸಂಭವಿಸಿದ ಬಳಿಕ ಮೋಹನ್‌ ಬಾಬು ಈ ಆಸ್ತಿಯನ್ನು ಬಲವಂತವಾಗಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ" ...