ಭಾರತ, ಏಪ್ರಿಲ್ 27 -- ಕನ್ನಡ ಕಿರುತೆರೆಯಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟ-ನಟಿಯರು ತಾವು ನಟಿಸುವುದಕ್ಕೆ ಮಾತ್ರವಲ್ಲ ನಿರ್ಮಾಣಕ್ಕೂ ಸೈ ಎಂದಿದ್ದಾರೆ. ಧಾರಾವಾಹಿ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡುವ ಮೂಲಕ ತಮ್ಮದೇ ಪ್ರೊಡಕ್ಷನ್‌ನಲ್ಲಿ ಧಾರಾವಾಹಿಗಳನ್ನು ಹೊರ ತರುತ್ತಿದ್ದಾರೆ. ಖ್ಯಾತ ನಿರ್ಮಾಪಕಿ ಶೃತಿ ನಾಯ್ಡುಯಿಂದ ಹಿಡಿದು ಇತ್ತೀಚಿನ ಮೇಘಾಶೆಟ್ಟಿವರೆಗೆ ಹಲವರು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ನಂತರ ನಿರ್ಮಾಣ ಜವಾಬ್ದಾರಿ ಹೊತ್ತ ಕೆಲವು ನಟ-ನಟಿಯರ ಪರಿಚಯ ಇಲ್ಲಿದೆ.

ನಟಿಯಾಗಿ ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಮಿಂಚಿದ್ದ ಶ್ರುತಿ ನಾಯ್ಡು ಈಗ ಖ್ಯಾತ ನಿರ್ಮಾಪಕಿ. ಇವರು ಬ್ರಹ್ಮಗಂಟು, ದೇವಿ, ಮಹಾದೇವಿ, ಮನಸ್ಸೆಲ್ಲಾ ನೀನೆ ಮುಂತಾದ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರೀಮಿಯರ್‌ ಪದ್ಮಿನಿ ಎಂಬ ಸಿನಿಮಾವನ್ನು ಕೂಡ ನಿರ್ಮಾಣ ಮಾಡಿರುವ ಅಯ್ಯನ ಮನೆ ಎಂಬ ವೆಬ್‌ಸರಣಿಯ ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ...