ಭಾರತ, ಫೆಬ್ರವರಿ 17 -- ಧಾರವಾಡ: ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮಹತ್ಯೆ ಆಲೋಚನೆ ಇರುವಂಥವರು ಸಿಕ್ಕರೆ ಅವರನ್ನು ಅಂತಹ ಆಲೋಚನೆಗಳಿಂದ ಹೊರ ತರಬೇಕಾದ್ದು ಅವಶ್ಯ ಎಂದು ವೈದ್ಯಕೀಯ ಪರಿಣತರು ಆಗ್ಗಾಗೆ ಹೇಳುತ್ತಲೇ ಇರುತ್ತಾರೆ. ಆದಾಗ್ಯೂ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲೋಕೂರ ಗ್ರಾಮದಲ್ಲಿ ಯುವಕ ಹಾಗೂ ದೇವರ ಹುಬ್ಬಳ್ಳಿ ಗ್ರಾಮದ ಮಾನಸಿಕ ಅಸ್ವಸ್ಥನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ನಡೆದಿದೆ.

ಧಾರವಾಡ: ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಲೋಕೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರ್‍ಯಾವಪ್ಪ ಚನಬಸಪ್ಪ ಗಾಂಜಿಯವರ (35) ಆತ್ಮಹತ್ಯೆ ಮಾಡಿಕೊಂಡ ಯುವಕ. ಪತ್ನಿ ತವರಿಗೆ ಹೋಗಿದ್ದರಿಂದ ಮನನೊಂದಿದ್ದ ಈತನು ರವಿವಾರ ಸಂಜೆ ಮನೆಯಲ್ಲಿ ವಿಷ ಸೇವಿಸಿದ್ದನು. ತೀವ್ರ ಅಸ್ವಸ್ಥನಾದ ಅವನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಉಸಿರೆಳೆದಿದ್ದಾನೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ| ಆತ್ಮಹತ್ಯೆ ತಡೆ...