Bengaluru, ಏಪ್ರಿಲ್ 9 -- ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ನಿನ್ನೆ (ಏಪ್ರಿಲ್ 8) ಬಂದಿದೆ. ಅನೇಕರು ತಮಗೆ ಕಡಿಮೆ ಅಂಕ ಬಂತಲ್ಲ ಅಂತ ಚಿಂತೆಗೀಡಾಗಿರಬಹುದು. ಹಾಗೆ ಚಿಂತೆ ಮಾಡ್ತಾ ಕೂರೋದು ಬೇಕಾಗಿಲ್ಲ. ಈ ರೀತಿ ಭಾವನೆ ಇರುವಂಥವರು ತಮ್ಮ ಉತ್ತರ ಪ್ರತಿಕೆಗಳ ಸ್ಕ್ಯಾನ್ಡ್‌ ಪ್ರತಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಪರೀಕ್ಷಾ ಪ್ರಾಧಿಕಾರ ಏಪ್ರಿಲ್ 13ರ ತನಕ ಕಾಲಾವಕಾಶ ನೀಡಿದೆ. ಇದಕ್ಕಾಗಿ ಕೆಲವೊಂದು ವಿಶೇಷ ಸೂಚನೆಯನ್ನೂ ಅದು ನೀಡಿದ್ದು, ಅದನ್ನೂ ವಿದ್ಯಾರ್ಥಿಗಳು ಗಮನಿಸವುದು ಉತ್ತಮ.

1) ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿ ಸ್ಕ್ಯಾನ್ ಪ್ರತಿ ಪಡೆದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

2) ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿರುವ ವಿಷಯಗಳಿಗೆ ಪ್ರತ್ಯೇಕವಾಗಿ ಮರುಎಣಿಕೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

3) ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು, ಹೊರತುಪಡಿಸಿ ಇನ್ನಾವುದೇ ...