Delhi, ಮೇ 12 -- ದೆಹಲಿ: ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ಘಟನೆ ನಂತರ ಪಾಕಿಸ್ತಾನ ಹಾಗೂ ಭಾರತದ ನಡುವೆ ದಾಳಿ ಪ್ರತಿದಾಳಿಗಳು ನಡೆದಿವೆ. ಪಾಕಿಸ್ತಾನದ ಉಗ್ರರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವ ಭಾರತ ಸೂಕ್ತ ಉತ್ತರ ನೀಡಿದೆ. ಇದರೊಟ್ಟಿಗೆ ಕದನ ವಿರಾಮದಂತಹ ಚಟುವಟಿಕೆಗಳು ನಡೆದರೂ ಯಾವುದೂ ಪರಿಣಾಮ ಬೀರಿಲ್ಲ. ಉಗ್ರರ ದಾಳಿ, ಆನಂತರ ಪಾಕಿಸ್ತಾನದ ಉಗ್ರರ ಮೇಲೆ ಭಾರತದ ಪ್ರತ್ಯುತ್ತರ ಬೆಳವಣಿಗೆ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿ ಭಾರತದ ನಿಲುವುಗಳನ್ನು ವಿಶ್ವದ ಮುಂದೆ ಇಟ್ಟರು. ಹನ್ನೊಂದು ವರ್ಷದ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಹಲವು ಬಾರಿ ಈ ರೀತಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ಭಾರತದ ಮೇಲೆ ಭಯೋತ್ಪಾದಕರ ದಾಳಿ ಮೂರು ವಾರದ ಹಿಂದೆ ಭೀಕರವಾಗಿತ್ತು. ಅದೂ ಮಕ್ಕಳ ಎದುರೇ ತಂದೆಯನ್ನು ಕೊಲ್ಲಲಾಯಿತು. ಪತ್ನಿಯರ ಎದುರೇ ಭಾರತದ ಹೆಣ್ಣು ಮಕ್ಕಳ ಸಿಂದೂರ ಅಳಿಸುವ ಪ್ರ...