ಭಾರತ, ಮೇ 2 -- ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ದಿವಾನ್‌ ಕಂಪನಿಯಲ್ಲಿ ಪ್ರಮೋಷನ್‌ ದೊರಕಿತ್ತು. ಕಂಪನಿಯ ಪ್ರಮುಖ ಹುದ್ದೆ ಪಡೆದಿರುವ ಈತನಿಗೆ ಬೋರ್ಡ್‌ ಸದಸ್ಯತ್ವ ಕೂಡ ದೊರಕಿದೆ. ಈ ಸಂದರ್ಭದಲ್ಲಿ ಆತ ತನ್ನ ನಿಜವಾದ ಬುದ್ಧಿಯನ್ನು ತೋರಿಸಲು ಆರಂಭಿಸಿದ್ದಾನೆ.

ಹೌದು, ಜೈದೇವ್‌ ದಿವಾನ್‌ ಕಂಪನಿಯಲ್ಲಿ ಜಾಬ್‌ ಕಟ್‌ ಆರಂಭಿಸಿದ್ದಾನೆ. ಟಾಪ್‌ ಪೋಸ್ಟ್‌ನಲ್ಲಿರುವ ಪ್ರಮುಖರನ್ನು ಕೆಲಸದಿಂದ ತೆಗೆಯಲು ಮುಂದಾಗಿದ್ದಾನೆ. ಸೀನಿಯರ್‌ ಪೋಸ್ಟ್‌ನಲ್ಲಿರುವವರಿಗೆ ಹೆಚ್ಚು ಸಂಬಳ ನೀಡುವುದು ವೇಸ್ಟ್‌ ಅನ್ನೋದು ಅಭಿಪ್ರಾಯ. ಮುಖ್ಯವಾಗಿ ಗೌತಮ್‌ ಆಪ್ತರನ್ನು ಕಂಪನಿಯಿಂದ ತೆಗೆಯಲು ಉದ್ದೇಶಿಸಿದ್ದಾನೆ.

ವಿಶೇಷವೆಂದರೆ, ಈ ಯಾವುದೇ ಪ್ರಕ್ರಿಯೆಗಳು ಗೌತಮ್‌ ದಿವಾನ್‌ ಅರಿವಿಗೆ ಬಂದಿರುವುದಿಲ್ಲ. ಗೌತಮ್‌ ಪಕ್ಕದಲ್ಲಿ ಆನಂದ್‌ ಕುಳಿತು ಕಾರಲ್ಲಿ ಹೋಗುವಾಗ ಕಂಪನಿಯ ಹಿರಿಯ ಉದ್ಯೋಗಿಯೊಬ್ಬರು ಕೆಲಸ ಕಳೆದುಕೊಂಡಿರುವ ಕುರಿತು ತಿಳಿಸುತ್ತಾರೆ. ಆನಂದ್‌ಗೆ ಅಚ್ಚರಿಯಾಗುತ್ತದೆ.

ಇದಾದ ಬಳಿಕ ಆನಂದ್‌ಗೂ ತನ್ನ ಕೆಲಸ ಹೋಗುತ್ತದೆ ಎಂದು ತಿಳಿ...