ಭಾರತ, ಮೇ 22 -- ಬೆಂಗಳೂರು: ದೇವಸ್ಥಾನಗಳ ಹುಂಡಿಗೆ ಹಾಕುವ ಹಣ ದೇವರಿಗೆ ಕೊಡುವ ಕೊಡುಗೆ ಎಂದು ಭಾವಿಸಲಾಗುತ್ತದೆ. ಆ ಹಣವನ್ನು ಹಿಂಪಡೆಯುವ ಪದ್ದತಿ ಇರುವುದಿಲ್ಲ. ರಾಜ್ಯದಲ್ಲಿ ದರೋಡೆ ಪ್ರಕರಣಗಳು ಇಳಿಮುಖವಾಗಿದ್ದರೂ ದೇವಾಲಯಗಳಲ್ಲಿ ಹಗಲಿನಲ್ಲೇ ನಡೆಯುವ ದರೋಡೆ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ. ಹುಂಡಿ ಹಣವನ್ನು ಕದಿಯಬಾರದು ಎಂಬ ನೀತಿ ಕಳ್ಳರಿಗೆ ಅನ್ವಯವಲ್ಲ.!

ಹೌದು, ಪೊಲೀಸ್‌ ಇಲಾಖೆಗಳ ಮಾಹಿತಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ದರೋಡೆ ಪ್ರಕರಣಗಳು ಶೇ. 73 ರಷ್ಟು ಕಡಿಮೆಯಾಗಿವೆ. ಸರಗಳ್ಳತನ ಪ್ರಕರಣಗಳು ಶೇ. 57ರಷ್ಟು ಕಡಿಮೆಯಾಗಿವೆ. ರಾತ್ರಿಯಲ್ಲಿ ನಡೆಯುವ ದರೋಡೆ ಪ್ರಕರಣಗಳೂ ಶೇ. 41 ರಷ್ಟು ಇಳಿಮುಖವಾಗಿವೆ. ಆದರೆ ಹಗಲಿನಲ್ಲಿ ನಡೆಯುವ ದರೋಡೆ ಪ್ರಕರಣಗಳು ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಳವಾಗಿವೆ. ರಾಜ್ಯಾದ್ಯಂತ ದೇವಾಲಯಗಳಲ್ಲಿ ನಡೆಯುವ ಕಳ್ಳತನಗಳು ವರದಿಯಾಗದ ದಿನವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ...