Bangalore, ಏಪ್ರಿಲ್ 26 -- ಬೆಂಗಳೂರು: ಕರ್ನಾಟಕದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಕುಸಿತ ಕಂಡಿದೆ. ಅದರಲ್ಲೂ ಈ ಬಾರಿ ಗೇಟ್‌ ಮುರಿದು ತೊಂದರೆಗೆ ಒಳಗಾದ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಬೇಸಿಗೆ ಮುಗಿಯಲು ಇನ್ನೂ ಒಂದು ತಿಂಗಳ ಇರುವಾಗಲೇ ಶೇ. 6 ಕ್ಕೆ ಕುಸಿತ ಕಂಡಿದೆ. ಮಲೆನಾಡು ಭಾಗದ ಅತೀ ದೊಡ್ಡ ಜಲಾಶಯವಾದ ಶಿವಮೊಗ್ಗದ ಲಿಂಗನಮಕ್ಕಿ ನೀರಿನ ಮಟ್ಟವೂ ಶೇ. 30ಕ್ಕೆ ಇಳಿಕೆ ಕಂಡಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಮುಖ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುವುದರಿಂದ ಬೇಸಿಗೆ ಮುಗಿಯುವವರೆಗೂ ಬೆಂಗಳೂರು, ಮೈಸೂರು, ಧಾರವಾಡ, ಶಿವಮೊಗ್ಗ, ವಿಜಯಪುರ ಸಹಿತ ಪ್ರಮುಖ ನಗರಗಳು, ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಒದಗಿಸುವ ವಿಶ್ವಾಸದಲ್ಲಿ ಅಧಿಕಾರಿಗಳಿದ್ದಾರೆ.

ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಕಳೆದ ವರ್ಷ ಜಲಾಶಯಗಳು ಶೇ. 50 ರಷ್ಟು ಭರ್ತಿಯಾಗುವುದಲ್ಲಿ ಹೆಚ್ಚಾಗಿ ಹೋಗಿತ್ತು. ಕೆಲವು ಜಲಾಶಯಗಳಿಗೆ ಮಾತ್ರ ಹೆಚ್ಚಿನ ನೀರು ಹರಿದು ಬಂದರೂ ತುಂಬಲು ಆಗಲೇ ಇಲ್ಲ ಈ ಬಾರಿ ಪರಿಸ್ಥಿ...