Bengaluru, ಮೇ 20 -- ಮೈಸೂರು : ತಿರುಪತಿ ತಿಮ್ಮಪ್ಪನಿಗೆ 100 ಕೆ ಜಿ ತೂಕದ ಒಂದು ಜೊತೆ ನಂದಾದೀಪವನ್ನು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉಡುಗೊರೆಯಾಗಿ ನೀಡಿದ್ದಾರೆ. 100 ಕೆ ಜಿ ತೂಕದ ಬೆಳ್ಳಿಯ ಎರಡು ನಂದಾದೀಪ‌ಗಳನ್ನು ತಿರುಪತಿ ದೇಗುಲಕ್ಕೆ ಒದಗಿಸಲಾಗಿದೆ. ಈ ವೇಳೆ ಪ್ರಮೋದಾದೇವಿಯವರ ಪುತ್ರ ಹಾಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದರು.

300 ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ್ದ ನಂದಾದೀಪವನ್ನು ತಿರುಪತಿಯಲ್ಲಿ ಬಳಸಲಾಗುತ್ತಿತ್ತು. ಅಲ್ಲಿನ ನಂದಾದೀಪ ಸತತ 300 ವರ್ಷಗಳಿಂದ ಉರಿಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ನಂದಾ ದೀಪಗಳನ್ನು ದುರಸ್ತಿ ಮಾಡಲು ಸಾಧ್ಯವಾಗಿರಲಿಲ್ಲ.

ನಂದಾದೀಪದ ದುಸ್ಥಿತಿ ಕಂಡು ರಾಜಮಾತೆ ಹೊಸ ದೀಪಗಳನ್ನು ನೀಡಿದ್ದಾರೆ. ಮೇ 18ರಂದು ತಿರುಮಲ ತಿರುಪತಿ ದೇಗುಲದ ಆಡಳಿತ ಮಂಡಳಿ ಸದಸ್ಯರಿಗೆ ನಂದಾ ದೀಪಗಳನ್ನು ಅವರು ಒಪ್ಪಿಸಿದ್ದಾರೆ. ಈ ನಂದಾದೀಪಗಳು ಮುಂದಿನ‌ 300 ವರ್ಷಗಳ ಕಾಲ ಸತತವಾಗಿ ಉರಿಯುವ ಸಾಮರ್ಥ್ಯ ಹೊಂದಿವೆ.

Publ...