Bengaluru, ಮೇ 1 -- ಜಗತ್ತಿನ ಸಕಲ ಕೆಲಸ ಕಾರ್ಯಗಳು ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂಬ ಭಾವನೆ ಭಗವಾನ್ ವಿಷ್ಣುವಿನಲ್ಲಿ ಮೂಡುತ್ತದೆ. ಈ ಕಾರಣದಿಂದ ಬ್ರಹ್ಮನಿಗೆ ಮಾನಸ ಪುತ್ರರನ್ನು ಸೃಷ್ಟಿಸಲು ತಿಳಿಸುತ್ತಾನೆ. ಆಗ ಬ್ರಹ್ಮದೇವನು 10 ಮಾನಸ ಪುತ್ರರಿಗೆ ಜನ್ಮನೀಡುತ್ತಾನೆ. ಈ ಹತ್ತು ಜನರಲ್ಲಿ ಆಂಗೀರಸನು ಸಹ ಒಬ್ಬನಾಗಿರುತ್ತಾನೆ. ಆಂಗೀರಸನ ಪತ್ನಿಯೇ ಶ್ರದ್ದಾದೇವಿ. ಇವರ ಪುತ್ರನ ಹೆಸರು ಬೃಹಸ್ಪತಿ. ಇವರು ದೇವತೆಗಳ ಗುರುವಾಗುತ್ತಾರೆ. ನಮ್ಮ ದಿನ ನಿತ್ಯದ ಜೀವನದಲ್ಲಿನ ಆಗುಹೋಗುಗಳು ಸೂರ್ಯ ಮತ್ತು ಚಂದ್ರರನ್ನು ಅವಲಂಭಿಸಿವೆ. ಇವರನ್ನು ನಿಯಂತ್ರಿಸುವ ಕರ್ತವ್ಯ ಬೃಹಸ್ಪತಿಗೆ ದೊರೆಯುತ್ತದೆ. ಆದ್ದರಿಂದ ನಮ್ಮ ನಿತ್ಯಜೀವನದಲ್ಲಿ ಗುರುವಿಗೆ ವಿಶೇಷವಾದ ಗೌರವ ಮತ್ತು ಭಕ್ತಿ ತೋರಿಸುತ್ತೇವೆ. ಇದೇ ಕಾರಣದಿಂದ ಮನೆತನದ ಹಿರಿಯರು ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ನೀಡಬೇಕೆಂದು ಮಕ್ಕಳಿಗೆ ತಿಳಿ ಹೇಳುತ್ತಾರೆ.

ಒಟ್ಟಾರೆ ಪ್ರತಿದಿನ ಗುರುಗಳ ಪೂಜೆ ಮಾಡುವುದು ಮತ್ತು ಗುರುಗಳ ಆಶೀರ್ವಾದವನ್ನು ಪಡೆಯುವುದರಿಂದ ಸುಖ ಮತ್ತು ಸಂತೃಪ...