ಭಾರತ, ಏಪ್ರಿಲ್ 10 -- Tahawwur Hussain Rana: ಭಾರತದಲ್ಲಿ 26/11ರ ಮುಂಬಯಿ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಹವ್ವುರ್ ಹುಸೇನ್‌ ರಾಣಾನನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಈ ನಡುವೆ, ಆತ ರೂಪಿಸಿದ್ದ ಸಂಚಿನ ಪ್ರಕಾರ ಭಾರತದಲ್ಲಿ ನಡೆದ ಉಗ್ರ ದಾಳಿಗಳ ವಿಚಾರಗಳು ಒಂದೊಂದಾಗಿ ಚರ್ಚೆಗೆ ಬರತೊಡಗಿವೆ. ಮುಂಬಯಿ ದಾಳಿಗೂ ಮುನ್ನ ತಹವ್ವುರ್ ರಾಣಾ ಭಾರತಕ್ಕೆ ಭೇಟಿ ನೀಡಿದ್ದ. ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಕೂಡ ರಾಣಾ ನಿಕಟ ಸಂಪರ್ಕದಲ್ಲಿದ್ದ ಎಂದು ವರದಿಯಾಗಿದೆ. ಇದಲ್ಲದೆ, ಇಂಡಿಯಾ ಗೇಟ್ ಸೇರಿದಂತೆ ಇತರ ಅನೇಕ ಪ್ರಮುಖ ಸ್ಥಳಗಳು ಅವನ ಸಂಚಿನ ಟಾರ್ಗೆಟ್ ಆಗಿದ್ದವು ಎಂಬ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿವೆ.

ತಹವ್ವುರ್ ರಾಣಾ ಮತ್ತು ಹೆಡ್ಲಿ ಸೇರಿದಂತೆ ಕೆಲವು ಭಯೋತ್ಪಾದಕರು ಇನ್ನೂ ಅನೇಕ ಸ್ಥಳಗಳನ್ನು ಗುರಿಯಾಗಿಸಲು ಯೋಜಿಸಿದ್ದರು. ಇವುಗಳಲ್ಲಿ ನ್ಯಾಷನಲ್ ಡಿಫೆನ್ಸ್ ಕಾಲೇಜ್, ದೆಹಲಿಯ ಇಂಡಿಯಾ ಗೇಟ್ ಮತ್ತು ಹಲವಾರು ಯಹೂದಿ ಕೇಂದ್ರಗಳು ಸೇರಿವೆ. ರಾಣಾ ಮತ್ತು ಹೆಡ್ಲಿ ಜೊ...