ಭಾರತ, ಏಪ್ರಿಲ್ 10 -- Terrorists Sheltered by Pakistan: 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರ ಪೈಕಿ ಒಬ್ಬನಾದ ತಹವ್ವುರ್‌ ಹುಸೇನ್ ರಾಣಾನನ್ನು ಭಾರತಕ್ಕೆ ಕರೆತರಲಾಗುತ್ತಿದೆ. 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಸಂಚನ್ನು ರೂಪಿಸುವಲ್ಲಿ ಆತ ಭಾಗಿಯಾಗಿರುವ ಕಾರಣ, ಆತನನ್ನು ಭಾರತದ ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಲು ಭಾರತ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಗೃಹ ಸಚಿವಾಲಯವು ಹಿರಿಯ ವಕೀಲರ ನರೇಂದರ್ ಮಾನ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿದೆ. ರಾಣಾ ಅಲ್ಲದೆ, ಭಾರತದ ಹಿಡಿತಕ್ಕೆ ಸಿಗದೇ ದೂರವಿರುವ ಇನ್ನೂ ಅನೇಕ ಭಯೋತ್ಪಾದಕರು ಜಗತ್ತಿನ ವಿವಿಧೆಡೆ ಇದ್ದಾರೆ. ಭಾರತ ಸರ್ಕಾರ ಅವರನ್ನೆಲ್ಲ ಗಡೀಪಾರು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಂತಹ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಪೈಕಿ ಹೆಚ್ಚಿನವರು ಪಾಕಿಸ್ತಾನದ ಸೇನೆ ಅಥವಾ ಐಎಸ್‌ಐ ರಕ್ಷಣೆಯೊಂದಿಗೆ ಪಾಕಿಸ್ತಾನದಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದಾರೆ.

ಮುಂಬಯ...