ಭಾರತ, ಮೇ 17 -- ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಿಗೆ ಸಂಬಂಧಿಸಿದ ಗಣತಿ ನಡೆಯುತ್ತಿದೆ. ಈ ಜನಗಣತಿ ವಿಚಾರವಾಗಿ ಹಲವು ಅಂಶಗಳು ಗಮನಸೆಳೆದಿದ್ದು, ಚರ್ಚೆಗಳಾಗುತ್ತಿವೆ. ಈ ನಡುವೆ, ಪತ್ರಕರ್ತ ಕೃಷ್ಣ ಭಟ್ ಅವರು, ಡೇಟಾ ಸಂಗ್ರಹದ ವಿಚಾರದಲ್ಲಿ ಸಾಮಾನ್ಯ ಎಲೆಕ್ಟ್ರಾನಿಕ್ ಜ್ಞಾನ ನಮ್ಮ ಸರ್ಕಾರಕ್ಕೆ, ಅಧಿಕಾರಿಗಳಿಗೆ ಯಾಕೆ ಇಲ್ಲ ಎಂದು ಪ್ರಶ್ನಿಸಿ ಕೆಲವು ವಿಚಾರಗಳ ಕಡೆಗೆ ಗಮನಸೆಳೆದಿದ್ದಾರೆ.

ನಾವು ಡೇಟಾ ಬಗ್ಗೆ ಎಷ್ಟು ಇನ್ಸೆನ್ಸಿಟಿವ್ ಆಗಿದ್ದೇವೆ! ಮಹತ್ವದ ಡೇಟಾವನ್ನು ಹೇಗೆ ಸಂಗ್ರಹಿಸಬೇಕು ಮತ್ತು ಅದನ್ನು ಹೇಗೆ ಶೇಖರಿಸಬೇಕು ಎಂಬ ಸಾಮಾನ್ಯ ಎಲೆಕ್ಟ್ರಾನಿಕ್ ಜ್ಞಾನ ನಮ್ಮ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಯಾಕೆ ಇಲ್ಲ?

ಒಳ ಮೀಸಲಾತಿ ಸಮೀಕ್ಷೆ ಶುರುವಾಗಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಇದನ್ನು ಎಷ್ಟು ಅಪಾಯಕಾರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರೆ, ಇದರಲ್ಲಿ ಸಂಗ್ರಹವಾಗುವ ಡೇಟಾ ಬಗ್ಗೆ ಸಮೀಕ್ಷೆ ನಡೆಸುವವರಿಗೆ ಸ್ವಲ್ಪವೂ ಕಾಳಜಿ ಇಲ್ಲದ ಹಾಗಿದೆ.

ಈ ಸಮೀಕ್ಷೆಗೆ ಒಂದು ಆಂಡ್ರಾಯ್ಡ್ ಆಪ್ ಸಿದ್ಧಪಡ...