Bangalore, ಏಪ್ರಿಲ್ 26 -- ಬೆಂಗಳೂರು: ಗ್ರೇಟರ್‌ ಬೆಂಗಳೂರು ಟೌನ್‌ ಶಿಪ್‌ ಅನ್ನು ಸುಮಾರು 10,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್‌ ಅವರು ಹೇಳಿದ್ದಾರೆ. ಅವರು ಹೇಳಿರುವಂತೆ ಅಂತಹುದೊಂದು ಟೌನ್‌ ಶಿಪ್‌ ಸಿದ್ದವಾದರೆ ಯೋಜನೆ ಮತ್ತು ಮೂಲಭೂತ ಸೌಕರ್ಯದಲ್ಲಿ ಈಗಿನ ಬೆಂಗಳೂರನ್ನೂ ಹಿಂದಿಕ್ಕುವುದರಲ್ಲಿ ಸಂಶಯವೇ ಇಲ್ಲ. ಯೋಜನಾ ಬದ್ಧವಾಗಿ ರಚಿಸಲಾಗಿರುವ ದೆಹಲಿ ಚಂಡೀಗಡ ಮೊದಲಾದ ಅತ್ಯುತ್ತಮ ನಗರಗಳ ಅಧ್ಯಯನ ನಡೆಸಿ ಗ್ರೇಟರ್‌ ಬೆಂಗಳೂರು ವಿನ್ಯಾಸ ಮಾಡಲಾಗುತ್ತದೆ. ಒಟ್ಟಾರೆ ಕನಸಿನ ಕೂಸಾದ

ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿಯಲ್ಲಿ ದೇಶಕ್ಕೆ ಒಂದು ಬೆಂಚ್‌ ಮಾರ್ಕ್‌ ಹಾಕಿಕೊಡಲಿದೆ ಎನ್ನುವುದು ಡಿಕೆಶಿ ಅವರ ವಾದಸರಣಿಯಾಗಿದೆ.

ಬಿಡದಿ ಸೇರಿದಂತೆ 7 ಭಾಗಗಳಲ್ಲಿ ಟೌನ್‌ ಶಿಪ್‌ ಮಾಡಲು ಹೊರಟಿದ್ದವರು ಮತ್ತು ಆ ಯೋಜನೆಯ ಪಿತಾಮಹರೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ. ಇದೀಗ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ...