ಭಾರತ, ಮೇ 8 -- ಭಾರತ ಗೌರವ ಶಿಬಿರ: ಬೆಂಗಳೂರಿನ ಹೊರವಲಯದಲ್ಲಿ ಜೂನ್ 14 ರಿಂದ 22 ರವರೆಗೆ ಸಾಕ್ಷಿ ಟ್ರಸ್ಟ್ ವತಿಯಿಂದ ಭಾರತ ಗೌರವ ಎಂಬ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದಾದಿದೆ. ಈ ಶಿಬಿರದಲ್ಲಿ ಏನೆಲ್ಲಾ ಇರುತ್ತೆ ಎಂಬ ಮಾಹಿತಿಯನ್ನು ಸಾಕ್ಷಿ ಟ್ರಸ್ಟ್ ಹಂಚಿಕೊಂಡಿದೆ.

ಭಾರತದ ಪರಂಪರೆ ಪೂರ್ಣವಾಗಿ ಅರಿಯಬೇಕಾಗಿದೆ. ಮಸುಕಾದ ನಮ್ಮ ಸಂಸ್ಕೃತಿ-ಸ್ಮರಣೆಗೆ ಹೊಳಪು ನೀಡಬೇಕಾಗಿದೆ. ಭಾರತದಲ್ಲಿ ಅಗಿಹೋದ ಪ್ರಾತಃಸ್ಮರಣೀಯರನ್ನು ನೆನೆಯಬೇಕು. ವಿಶ್ವಗುರು ಪರಂಪರೆ ಮೆರೆಯಲು ನಾವೆಲ್ಲ ಸಿದ್ಧರಾಗಬೇಕು. ಸಂಸ್ಕೃತಿಯ ತೇರು ಎಳೆಯಲು, ಪರಂಪರೆಯ ಪಲ್ಲಕ್ಕಿ ಹೊರಲು ಮನಸ್ಸು ಮಾಡಬೇಕು. ದೇವರು ದಯಪಾಲಿಸಿದ ಶಕ್ತಿ, ಯುಕ್ತಿ, ಸಾಮರ್ಥ್ಯ ಮತ್ತು ಸದ್ಗುಣಗಳನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಬೇಕು. ಈ ಸಿದ್ಧತೆಗಾಗಿ "ಭಾರತ ಗೌರವ ಶಿಬಿರ" ಆಯೋಜಿಸಲಾಗಿದೆ ಎಂದು ಸಾಕ್ಷಿ ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ವೇದಗಳು ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಅಂದು ಇಂದು ಮುಂ...