ಭಾರತ, ಮೇ 7 -- ಭಾರತ ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದಾದರೆ ಆ ಬಗ್ಗೆ ಗ್ರಹಗತಿಗಳ ಸೂಚನೆ ಹೇಗಿರಬಹುದು ಎನ್ನುವ ಕುತೂಹಲ ಉಳ್ಳವರಿಗೆ, ಗ್ರಹಗತಿಗಳ ಪರಿಣಾಮದ ಬಗ್ಗೆ ಹಲವು ಜನರಲ್ಲಿ ಒಂದು ತಪ್ಪು ಅಭಿಪ್ರಾಯ ಇದೆ. ಎಲ್ಲವನ್ನೂ ಗ್ರಹಗಳೇ ಮಾಡಿಸುತ್ತವೆ ಎನ್ನವುದು ತಪ್ಪು ಅಭಿಪ್ರಾಯ. ನಾವೇನಾದರೂ ಮಾಡುವುದಿದ್ದರೆ ಗ್ರಹಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ ವಿನಃ ಗ್ರಹಗಳೇ ನಮ್ಮಿಂದ ಎಲ್ಲವನ್ನು ಮಾಡಿಸುವುದಿಲ್ಲ.

ನಮ್ಮ ಚಟುವಟಿಕೆಗಳ ಮೇಲೆ ಗ್ರಹಗಳ ಪರಿಣಾಮ ಇರುತ್ತದೆ. ಅಲ್ಲಿ ಪೊಲೀಸರು ನಿಂತಿದ್ದಾರೆ ಅಂದರೆ ಪೊಲೀಸರು ಲಾಠಿ ಬೀಸಿಕೊಂಡು ಯಾರಿಗೂ ಪೆಟ್ಟು ಕೊಡಲು ಹೋಗುವುದಿಲ್ಲ. ಅಲ್ಲಿ ಇರುವ ಜನರು ನಿಯಮಗಳನ್ನು ಮೀರಿದಾಗ ಪೊಲೀಸರು ಅವರ ಕೆಲಸ ಮಾಡುತ್ತಾರೆ. ಆದರೆ ಪೊಲೀಸ್ ಇರುವುದು ಮಾತ್ರ ಸತ್ಯ. ಪೊಲೀಸರಿಗೆ ಅವರ ಅಧಿಕಾರ ಇರುವುದು ಕೂಡ ಅಷ್ಟೇ ಸತ್ಯ. ಹಾಗೆ ಈ ಗ್ರಹಗಳ ಪರಿಣಾಮಗಳು ಕೂಡ.

ಅಲ್ಲಿ ಶನಿ ಬಂತು ಇಲ್ಲಿ ರಾಹು ಬಂತು, ಇನ್ನೊಂದು ಕಡೆ ಕೇತು ಬಂತು, ಕುಜ ಬಂತು ಅಂತ ಹೇಳಿದ ಕ್ಷಣ ಯುದ್ಧಗಳು ಸಂಭವಿಸುವುದಿಲ್ಲ. ಅಲ...