Bengaluru, ಜೂನ್ 7 -- 2025 ರ ಜೂನ್ ತಿಂಗಳ 10ನೇ ದಿನಾಂಕದಂದು ಬೆಳಗಿನ ವೇಳೆ 10.25 ಕ್ಕೆ ಹುಣ್ಣಿಮೆ ತಿಥಿಯು ಆರಂಭವಾಗುತ್ತದೆ. ಈ ಕಾರಣದಿಂದಾಗಿ ಶೀ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಇದೇ ದಿನ ಮಾಡಬೇಕಾಗುತ್ತದೆ. ಇದೇ ದಿನ ಅನೂರಾಧ ನಕ್ಷತ್ರವು ಪೂರ್ಣಗೊಂಡು ಜೇಷ್ಠ ನಕ್ಷತ್ರ ಆರಂಭವಾಗುತ್ತದೆ. ಈ ದಿನದ ಪೂಜೆಯನ್ನು ನದಿ ತೀರದಲ್ಲಿ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ಬೆಳಗಿನ ವೇಳೆ ಕೆಲವರು ಈ ಪೂಜೆಯನ್ನು ಮಾಡುತ್ತಾರೆ. ಸಂಜೆಯ ವೇಳೆಯಲ್ಲಿಯೂ ಈ ಪೂಜೆಯನ್ನು ಮಾಡಬಹುದಾಗಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಈ ದಿನದಂದು ಕೇವಲ ಸತ್ಯನಾರಾಯಣ ಪೂಜೆಯನ್ನು ಆಚರಿಸಿದಲ್ಲಿ ಯಾವುದೇ ಶುಭಫಲಗಳು ದೊರೆಯುವುದಿಲ್ಲ. ಶ್ರೀ ಲಕ್ಷ್ಮಿಯನ್ನು ಕುಂಕುಮದಿಂದ ಅಷ್ಟೋತ್ತರದಿಂದ ಪ್ಲೂಜಿಸುವುದು ಹೆಚ್ಚು ಫಲದಾಯಕ. ಇದರಿಂದ ಹಣಕಾಸಿನ ಕೊರತೆಯು ಕಡಿಮೆ ಆಗುತ್ತದೆ. ಈ ದಿನದಂದು ದಂಪತಿಯ ಪೂಜೆಯನ್ನು ಮಾಡುವುದು ಬಲುಮುಖ್ಯ. ಸಾಮಾನ್ಯವಾಗಿ ರವೆಯಿಂದ ಮಾಡಿದ ಸಜ್ಜಿಗೆಯನ್ನು ದೇವರಿಗೆ ಅರ್ಪಿಸುವುದು ವಾಡಿಕೆಯಾಗಿದೆ. ಪೂ...