ಭಾರತ, ಜೂನ್ 14 -- ಅರ್ಥ: ಭರತ ವಂಶಜನಾದ ಅರ್ಜುನನೆ, ಒಬ್ಬನೇ ಸೂರ್ಯನು ಇಡೀ ವಿಶ್ವವನ್ನು ಹೇಗೆ ಬೆಳಗುತ್ತಾನೋ ಹಾಗೆಯೇ ದೇಹದೊಳಗಿರುವ ಜೀವಿಯು ಪ್ರಜ್ಞೆಯಿಂದ ಇಡೀ ದೇಹವನ್ನು ಬೆಳಗುತ್ತಾನೆ.
ಭಾವಾರ್ಥ: ಪ್ರಜ್ಞೆಯನ್ನು ಕುರಿತು ಹಲವಾರು ಊಹೆಗಳಿವೆ. ಭಗವದ್ಗೀತೆಯು ಇಲ್ಲಿ ಸೂರ್ಯ ಮತ್ತು ಸೂರ್ಯ ಪ್ರಕಾಶಗಳ ಉದಾಹರಣೆಯನ್ನು ಕೊಟ್ಟಿದೆ. ಸೂರ್ಯನು ಒಂದೇ ಸ್ಥಳದಲ್ಲಿರುತ್ತಾನೆ. ಆದರೂ ಇಡೀ ವಿಶ್ವಕ್ಕೆ ಬೆಳಕು ಕೊಡುತ್ತಾನೆ; ಹಾಗೆಯೇ ಜೀವಾತ್ಮನ ಒಂದು ಸಣ್ಣಕಣವು ಈ ದೇಹದ ಹೃದಯದಲ್ಲಿ ಇದ್ದರೂ ಪ್ರಜ್ಞೆಯ ಮೂಲಕ ಇಡೀ ದೇಹವನ್ನು ಬೆಳಗುತ್ತದೆ. ಸೂರ್ಯಪ್ರಕಾಶ ಅಥವಾ ಬೆಳಕು ಸೂರ್ಯನಿದ್ದಾನೆ ಎನ್ನುವುದಕ್ಕೆ ಪುರಾವೆಯಾದಂತೆ, ಪ್ರಜ್ಞೆಯು ಆತ್ಮನ ಇರುವಿಕೆಗೆ ಪುರಾವೆ. ದೇಹದಲ್ಲಿ ಆತ್ಮವಿದ್ದಾಗ ದೇಹದಲ್ಲಿ ಎಲ್ಲೆಲ್ಲಿಯೂ ಪ್ರಜ್ಞೆ ಇರುತ್ತದೆ; ಆತ್ಮವು ದೇಹವನ್ನು ಬಿಡುತ್ತಲೇ ಪ್ರಜ್ಞೆಯು ಇರುವುದಿಲ್ಲ. ಬುದ್ದಿವಂತನಾದ ಯಾವುದೇ ಮನುಷ್ಯನು ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ. ಆದುದರಿಂದ ಪ್ರಜ್ಞೆಯು ಜಡವಸ್ತುವಿನ ಸಂಯೋಜನೆಯಿಂದ ಆದದ...
Click here to read full article from source
To read the full article or to get the complete feed from this publication, please
Contact Us.