Bengaluru, ಮೇ 18 -- ಮಂಗಳೂರು: ಮಂಗಳೂರಿನ ಜಿಎಸ್‌ಟಿ ಕಮೀಷನರೇಟ್‌ನಿಂದ ಫಿಟ್ ಇಂಡಿಯಾ ಅಭಿಯಾನದ ಸಹಯೋಗದೊಂದಿಗೆ ಸೈಕಲ್ ಮ್ಯಾರಥಾನ್ ಅನ್ನು ಆಯೋಜಿಸಲಾಯಿತು. ಜಿಎಸ್‌ಟಿ ಕುರಿತು ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಆರೋಗ್ಯ ಕ್ಷಮತೆಯ ಪ್ರಚಾರದ ಭಾಗವಾಗಿ ಮಂಗಳೂರು ಜಿಎಸ್‌ಟಿ ಆಯುಕ್ತಾಲಯ, ಎಫ್ಐಟಿ ಇಂಡಿಯಾ ಅಭಿಯಾನದ ಸಹಯೋಗದೊಂದಿಗೆ, ಸೈಕಲ್ ಮ್ಯಾರಥಾನ್ ಅನ್ನು ಆಯೋಜಿಸಿತು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ 8 ವಾರ್ಷಿಕೋತ್ಸವದ ಹಿನ್ನೆಲೆ ನಡೆಯಿತು. "ಜಿಎಸ್‌ಟಿ: ತೆರಿಗೆಗಳನ್ನು ಸರಳೀಕರಿಸುವುದು; ನಾಗರಿಕರನ್ನು ಸಬಲೀಕರಣಗೊಳಿಸುವುದು" ಎಂಬ ವಿಷಯದ ಅಡಿಯಲ್ಲಿ ಈ ಕಾರ್ಯಕ್ರಮ ಜಿಎಸ್‌ಟಿಯ ಯಶಸ್ಸನ್ನು ಆಚರಿಸಿದ್ದಲ್ಲದೆ, ಭಾರತದಲ್ಲಿ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ, ಸುಧಾರಿಸುವ ಮತ್ತು ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ಬೆಳೆಸುವಲ್ಲಿ ಅದರ ಪಾತ್ರವನ್ನು ಸಾರಿದೆ ಎಂದು ಆಯುಕ್ತಾಲಯ ತಿಳಿಸಿದೆ.

ಮ್ಯಾರಥಾನ್‌ಗೆ ಮಂಗಳೂರಿನ ಕೇಂದ್ರ ತೆರಿಗೆ ಮತ್ತು ಸಿಜಿಎಸ್‌ಟಿ ಆಯುಕ್ತ ಎಸ್. ಕೇಶವ ನಾರಾಯಣ ರೆಡ...