Mangalore, ಫೆಬ್ರವರಿ 11 -- ಮಂಗಳೂರು: ಸರಕಾರ ತನ್ನ ಖಜಾನೆ ತುಂಬಿಸಲು ಏನೇನು ಮಾಡಬೇಕು ಅಂಥದ್ದನ್ನೆಲ್ಲಾ ಮಾಡುವ ಹೊತ್ತಿಗೆ, ಮರಣ ಪ್ರಮಾಣಪತ್ರವನ್ನೂ ಬಿಟ್ಟಿಲ್ಲ. ಒಬ್ಬರು ಸತ್ತಿದ್ದಾರೆ ಎಂದು ಪ್ರಮಾಣಪತ್ರ ಪಡೆಯಬೇಕಾದರೆ, ದುಡ್ಡು ಮೊದಲಿಗಿಂತ ಹತ್ತುಪಟ್ಟು ಹೆಚ್ಚು ಕೊಡಬೇಕು, ಇಡೀ ರಾಜ್ಯದಲ್ಲೇ ಈ ಪರಿಸ್ಥಿತಿ ಕೆಲ ದಿನಗಳಿಂದ ಸದ್ದಿಲ್ಲದೆ ಉದ್ಭವವಾಗಿದೆ. ಕೆಲ ತಿಂಗಳ ಹಿಂದೆ ಇದ್ದ ಶುಲ್ಕ ಮತ್ತು ಈಗಿನ ಶುಲ್ಕ ಹಾಗೂ ತಿಂಗಳಿಗೆ ಮತ್ತು ವರ್ಷಕ್ಕೆ ವಿಧಿಸಲಾಗುವ ದರಪಟ್ಟಿಯನ್ನೇ ನೋಡಿ. ಜನನ ಮರಣ ಪತ್ರಕ್ಕೆ ಹಿಂದಿನ ಶುಲ್ಕ 5 ರೂ ಇತ್ತು, ಈಗ 50 ರೂ ಆಗಿದೆ. 5 ಪ್ರತಿಗೆ 25 ರೂ ಇತ್ತು. ಈಗ 250 ರೂ ಆಗಿದೆ. ತಿಂಗಳಿಗೆ ದಂಡ 2 ರೂ ಇತ್ತು, ಈಗ 20 ರೂ ಆಗಿದೆ. ವರ್ಷದ ದಂಡ 5 ರೂ ಇತ್ತು, ಈಗ 50 ರೂ ಆಗಿದೆ. ಸಾರ್ವಜನಿಕರೂ ಕೂಡ ದರ ಏರಿಕೆ ಮಾಡಿದ್ದನ್ನು ಇದೇ ರೀತಿ ಪ್ರಶ್ನಿಸುತ್ತಿದ್ದಾರೆ.
ಫೆಬ್ರವರಿ 4ರಿಂದ ಈ ಆದೇಶ ಜಾರಿಯಾಗಿದೆ. ರಾಜ್ಯ ಸರಕಾರ ಪಂಚಗ್ಯಾರಂಟಿಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ ಎಂದು ಒಂದೆಡೆ ಹೇಳಿಕ...
Click here to read full article from source
To read the full article or to get the complete feed from this publication, please
Contact Us.