ಭಾರತ, ಮೇ 22 -- ಮದುವೆ ಎಂಬುದು ಎರಡು ಜೀವಗಳು, ಮನಸ್ಸುಗಳನ್ನು ಬೆಸೆಯುವ ಅಪರೂಪ ಸಂಗಮ. ಗಂಡ-ಹೆಂಡತಿ ಏಳೇಳು ಜನ್ಮದಲ್ಲೂ ಜೊತೆಯಾಗಿರಬೇಕು ಎಂದು ಸಪ್ತಪದಿ ತುಳಿಯಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯ ಬಂಧನ 7 ವರ್ಷವೂ ಗಟ್ಟಿಯಾಗಿರುವುದಿಲ್ಲ. ಗಂಡ-ಹೆಂಡತಿ ಇಬ್ಬರು ಜೊತೆಗೆ ಬಾಳಲು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ತಲುಪಿದಾಗ ಎದುರಿಗೆ ಬರುವುದು ವಿಚ್ಛೇದನ.

ಹಲವರು ಹೆಚ್ಚುತ್ತಿರುವ ವಿಚ್ಛೇದನಕ್ಕೆ ಜಗಳ, ಮನಸ್ತಾಪ, ನಂಬಿಕೆ ದ್ರೋಹ ಕಾರಣ ಎನ್ನುತ್ತಾರೆ. ಅವು ಪ್ರಸ್ತುತದಲ್ಲಿರುವ ಹಾಗೂ ಮೇಲ್ನೋಟಕ್ಕೆ ಕಾಣುವ ಕಾರಣವಾಗಿದೆ. ಆದರೆ ವಿಚ್ಛೇದನದ ಸಮಸ್ಯೆ ಹೆಚ್ಚಲು ಮೂಲ ಕಾರಣ ನಾವೆಲ್ಲರೂ ಭಾವಿಸಿದ್ದಕ್ಕಿಂತಲೂ ಸೂಕ್ಷ್ಮವಾಗಿದೆ. ಸಂಬಂಧದಲ್ಲಿನ ಬಿರುಕು ಯಾವಾಗಲೂ ಸ್ಫೋಟಕ ಕಾರಣದಿಂದ ಬರುವುದಿಲ್ಲ, ಆದರೆ ಕಾರ್ಪೆಟ್ ಅಡಿಯಲ್ಲಿ ತಳ್ಳಲ್ಪಟ್ಟ ವಿಷಯಗಳಿಂದ ಬರಬಹುದು ಎಂಬುದನ್ನು ಹಲವರು ಊಹಿಸಿಯೂ ಇರುವುದಿಲ್ಲ.

ಸಂಬಂಧ ಮತ್ತು ಸಾಂಸಾರಿಕ ಜೀವನಕ್ಕೆ ಸಂಬಂಧಿಸಿ ನಿಯಮಿತವಾಗಿ ಸಲಹೆಗಳನ್ನು ಹಂಚಿಕೊಳ್ಳುವ ಸಂಬಂಧ ತರಬೇ...