ಭಾರತ, ಮೇ 9 -- ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ, ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಶುಭವಿವಾಹ ಇಂದು ಕುಂದಾಪುರದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮ, ಸಡಗರದಿಂದ ನಡೆದಿದೆ. ತಾನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನ ಜತೆ ಇವರು ಸಪ್ತಪದಿ ತುಳಿದಿದ್ದಾರೆ. ಬಿಗ್‌ಬಾಸ್‌ ಸಹ ಸ್ಪರ್ಧಿ ರಜತ್‌ ಅವರು ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದಾರೆ. ಇವರ ಮದುವೆಯ ಸಂಭ್ರಮದ ಫೋಟೋಗಳು, ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಮದುವೆಗೆ ಅವರ ಆಪ್ತರು, ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು, ಕುಟುಂಬಸ್ಥರು ಆಗಮಿಸಿ ಶುಭಹಾರೈಸಿದ್ದಾರೆ. ಹಿರಿಯಡ್ಕ ಮೂಲದ ಶ್ರೀಕಾಂತ್ ಕಶ್ಯಪ್ ಜತ ಚೈತ್ರಾ ಮದುವೆಯಾಗಿದ್ದಾರೆ. ಮದುವೆಯ ತನಕವೂ ತಾನು ಮದುವೆಯಾಗಲಿರುವ ಹುಡುಗನ ಕುರಿತು ಇವರು ಬಾಯ್ಬಿಟ್ಟಿರಲಿಲ್ಲ. ಇವರಿಬ್ಬರು ಹನ್ನೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ವರದಿಗಳು ತಿ...