Bengaluru, ಮೇ 20 -- ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮಂಗಳವಾರ ಬೆಳಿಗ್ಗೆ 11ಕ್ಕೆ ವಿಚಾರಣೆ ನಿಗದಿಯಾಗಿತ್ತು. ಈ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಎ-2 ಆರೋಪಿ ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಆರಂಭವಾದಾಗ ದರ್ಶನ್‌ ಕೋರ್ಟ್‌ ಹಾಲ್‌ನಲ್ಲಿ ದೂರವೇ ನಿಂತಿದ್ದರು. ನ್ಯಾಯಾಧೀಶರು ಹೆಸರನ್ನು ಕರೆದಾಗಲೂ ದರ್ಶನ್ ದೂರವೇ ಉಳಿದಿದ್ದರು. ಆಗ ನ್ಯಾಯಾಧೀಶರು ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿದಾಗ ದರ್ಶನ್‌, ಪವಿತ್ರಾ ಗೌಡ ಪಕ್ಕಕ್ಕೆ ಬಂದು ನಿಂತುಕೊಂಡರು. ದರ್ಶನ್‌, ಪವಿತ್ರಾ ಸೇರಿದಂತೆ ಎಲ್ಲ 16 ಆರೋಪಿಗಳು ಇಲ್ಲಿನ 57ನೇ ಎಸಿಎಂಎಂ ನ್ಯಾಯಾಲಯಕ್ಕೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಮೂರನೇ ಆರೋಪಿ ಕೋರ್ಟ್‌ಗೆ ಗೈರಾಗಿದ್ದರು.

ನಿಮ್ಮ ವಿರುದ್ಧ ಐ‍ಪಿಸಿ ಸೆಕ್ಷನ್‌ಗಳಾದ 302, 34, 120(ಬಿ), 355, 143, 147ರ ಅಡಿ ಪ್ರಕರಣ ದಾಖಲಾಗಿದೆ. ಇದನ್ನು ಒಪ್ಪಿಕೊಳ್ಳುವಿರಾ ಎಂದು ನ್ಯಾಯಾಧೀಶರು ಕೇ...